ಸುದ್ದಿ ಮತ್ತು ಘಟನೆಗಳು
ಪತ್ರಿಕಾ ಪ್ರಕಟಣೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸಮಸ್ತ ಅಧಿಕಾರಿ ಮತ್ತು ಸಿಬ್ಬಂದಿಗಳ ಒಂದು ದಿನದ ವೇತನದ ಮೊತ್ತ ರೂ.9,17,09,008/- ಗಳನ್ನು ಕೊಡಗು ನೆರೆ ಸಂತ್ರಸ್ಥರ ನೆರವಿಗಾಗಿ ಮಾನ್ಯ ಮುಖ್ಯಮಂತ್ರಿಗಳ ‘ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಚೆಕ್.
ಬೆಂಗಳೂರು-ಚಿದಂಬರಂ, ಬೆಂಗಳೂರು-ಎರ್ನಾಕುಲಂ ಮಾರ್ಗಗಳಲ್ಲಿ ಹೊಸದಾಗಿ ಸಾರಿಗೆಗಳನ್ನು ದಿನಾಂಕ: 09-05-2019 ರಿಂದ ಕಾರ್ಯಾಚರಣೆ ಮಾಡುವ ಬಗ್ಗೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಚಿದಂಬರಂ ಮಾರ್ಗದಲ್ಲಿ ಕರೋನ ಎ.ಸಿ ಸ್ಲೀಪರ್ ಸಾರಿಗೆಯನ್ನು ಹಾಗೂ ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್.
ಬೆಂಗಳೂರು-ಮುನ್ನಾರ್, ಬೆಂಗಳೂರು-ಪೂನಾ, ಬೆಂಗಳೂರು-ವಿಜಯವಾಡ, ಬೆಂಗಳೂರು-ಸಿಕಂದ್ರಾಬಾದ್ ಮಾರ್ಗದಲ್ಲಿ ಹೊಸದಾಗಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡುವ ಬಗ್ಗೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಮುನ್ನಾರ್ ಮಾರ್ಗದಲ್ಲಿ ನಾನ್ ಎ.ಸಿ ಸ್ಲೀಪರ್ ಸಾರಿಗೆಯನ್ನು, ಬೆಂಗಳೂರು-ಪೂನಾ, ಬೆಂಗಳೂರು-ವಿಜಯವಾಡ, ಬೆಂಗಳೂರು-ಸಿಕಂದ್ರಾಬಾದ್.
ಪತ್ರಿಕಾ ಗೋಷ್ಠಿ.
ಕರ್ನಾಟಕ ರಾಜ್ಯದ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಆಧಿಕಾರಿಗಳ ಹಾಗು ನೌಕರರುಗಾಳ ಒಂದು ದಿನದ ವೇತನದ.
ಸಾರ್ವಜನಿಕ ಸಂಪರ್ಕಾಧಿಕಾರಿ, ಕೆ.ಎಸ್.ಆರ್.ಟಿ.ಸಿ ರವರಿಗೆ ದೇಶದ ರಸ್ತೆ ಲಾಜಿಸ್ಟಿಕ್ಸ್ನಲ್ಲಿ (ಸರ್ಕಾರಿ ಮತ್ತು ಖಾಸಗಿ ಎರಡೂ ಸೇರಿ) ಪ್ರತಿಷ್ಠಿತ ಇಂಡಿಯನ್ ಆಯಿಲ್ ಮತ್ತು ಟೈಮ್ಸ್ ನೆಟ್ವರ್ಕ್ ಎಕ್ಸಲೆನ್ಸ್ ಮಹಿಳಾ ಸಾಧಕಿ ಪ್ರಶಸ್ತಿ -2019.
ಭಾರತದಲ್ಲಿನ ರಸ್ತೆ ಲಾಜಿಸ್ಟಿಕ್ಸ್ ಉದ್ಯಮಗಳಲ್ಲಿಯೇ (ಖಾಸಗಿ ಹಾಗೂ ಸರ್ಕಾರಿ ಎರಡೂ ಸೇರಿ) ಮಹಿಳಾ ಸಾಧಕಿಯಾಗಿ ಆಯ್ಕೆಯಾಗಿರುವ ಡಾ.ಲತಾ ಟಿ.ಎಸ್, ಸಾರ್ವಜನಿಕ ಸಂಪರ್ಕಾಧಿಕಾರಿ, ಕೆಎಸ್ಆರ್ಟಿಸಿ ರವರಿಗೆ ಪ್ರತಿಷ್ಠಿತ ಇಂಡಿಯನ್ಆಯಿಲ್ ಮತ್ತು ಟೈಮ್ಸ್ ನೆಟ್ವರ್ಕ್ ಎಕ್ಸಲೆನ್ಸ್ ವರ್ಷದ.
ಕೋಲಾರ ಬಸ್ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಾಗೂ ಶ್ವಾನದಳದಿಂದ ತಪಾಸಣೆ ಮತ್ತು ಕೋಲಾರ ವಿಭಾಗೀಯ ಕಾರ್ಯಾಗಾರದಲ್ಲಿ ಅಗ್ನಿ ದುರಂತಗಳ ನಿರ್ವಹಣೆ ಬಗ್ಗೆ ಪ್ರದರ್ಶನ.
ನಿಗಮದ ಬಸ್ ನಿಲ್ದಾಣಗಳಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮುಂಜಾಗೃತಾ ಭದ್ರತಾ ಕ್ರಮಗಳನ್ನು ವಹಿಸಿರುವ ಬಗ್ಗೆ.
ಕೆ ಎಸ್ ಆರ್ ಟಿಸಿ ಗೆ ಭಾರತ ¸ಸರ್ಕಾರದ ಪ್ರತಿಷ್ಠಿತ ರಾಷ್ಟ್ರೀಯ ಹುಡ್ಕೋ ಉತ್ತಮ ಉಪಕ್ರಮ ಪ್ರಶಸ್ತಿ -2019 ಹಾಗೂ ರೂ. ಒಂದು ಲಕ್ಷ ನಗದು ಪುರಸ್ಕಾರ..
ಕೆ .ಎಸ್.ಆರ್.ಟಿ.ಸಿ.ಗೆ ಭಾರತ ಸರ್ಕಾರದ ಪ್ರತಿಷ್ಠಿತ “ ಬದುಕಿನ ವಾತಾವರಣವನ್ನು ಪ್ರೋತ್ಸಾಹಿಸುವ ಉತ್ತಮ ಪರಿಕ್ರಮಗಳು’’ 2018-19 ಹುಡ್ಕೋ ಪ್ರಶಸಿ ಲಭಿಸಿದೆ.
ಟಿಕೇಟ್ ಇಲ್ಲದೆ ಪ್ರಯಾಣಿಸಿದ 5851 ಪ್ರಯಾಣಿಕರಿಗೆ ದಂಡ.
ಮಾರ್ಚ್-2019ರ ಮಾಹೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕು ಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 40289 ವಾಹನಗಳನ್ನು ತನಿಖೆಗೊಳಪಡಿಸಿ 4596 ಪ್ರಕರಣಗಳನ್ನು ಪತ್ತೆಹಚ್ಚಿ.
ಯುಗಾದಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮದ ವತಿಯಿಂದ 600 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ.
ದಿನಾಂಕ 06.04.2019 ರಂದು ಯುಗಾದಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 05.04.2019 ಹಾಗೂ 06.04.2019 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 600 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ಟರ್ಮಿನಲ್-3ರಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಬಗ್ಗೆ.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ಟರ್ಮಿನಲ್-3ರಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಕೆಂಪೇಗೌಡ ಬಸ್ ನಿಲ್ದಾಣವನ್ನು ಇನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ನಿರ್ಗಮನ ಅಂಕಣಗಳನ್ನು ಈ ಕೆಳಕಂಡಂತೆ ಬದಲಾವಣೆ ಮಾಡಿ ದಿನಾಂಕ 01-04-2019 ರಿಂದ ನಿರ್ಗಮನಗಳನ್ನು ವರ್ಗಾಯಿಸಿ ಕಾರ್ಯಾಚರಿಸಲಾಗುವುದು.
p>ಉಗ್ರರ ದಾಳಿಗೆ ಹುತಾತ್ಮರಾದ ವೀರಯೋಧ ಶ್ರೀ.ಹೆಚ್. ಗುರು ರವರ ಪತ್ನಿ ಶ್ರೀಮತಿ. ಕಲಾವತಿ.ಎಸ್ ರವರಿಗೆ ನಿಗಮದ ವತಿಯಿಂದ ರೂ. 25,000/- ನಗದು ಮತ್ತು ಉಚಿತ ಬಸ್ ಪಾಸ್ನ ವಿತರಣೆ ಹಾಗೂ ಶ್ರೀ.ಹೆಚ್.ಗುರು ರವರ ತಾಯಿ ಶ್ರೀಮತಿ.ಚಿಕ್ಕತಾಯಮ್ಮ ಹಾಗೂ ತಂದೆ ಶ್ರೀ ಹೊನ್ನಯ್ಯ ರವರಿಗೆ ಉಚಿತ ಬಸ್ ಪಾಸ್ ನೀಡಿ ಗೌರವ ಸಮರ್ಪಣೆ ಹಾಗೂ ನಿಗಮದ ಒಟ್ಟು 49 ಮಹಿಳಾ ಸಿಬ್ಬಂದಿಗಳಿಗೆ ಸನ್ಮಾನ 17 ವಿಭಾಗದಿಂದ ಓರ್ವ ಮಹಿಳಾ ನಿರ್ವಾಹಕಿ(Conductor) ಮತ್ತು ಒಬ್ಬ ಮಹಿಳಾ ತಾಂತ್ರಿಕ ಸಿಬ್ಬಂದಿ(Mechanic) ಹಾಗೂ ಭದ್ರತಾ ರಕ್ಷಕಿ (Security Guards)
ದಿನಾಂಕ 08-03-2019 ಬೆಳಗ್ಗೆ 10.30 ಗಂಟೆಗೆ, ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶ್ರೀ.ಬಿ.ಸತ್ಯನಾರಾಯಣ, ಮಾನ್ಯ ಶಾಕರು ಶಿರಾ ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು, ಕರಾರಸಾನಿಗಮ, ಶ್ರೀ.ಶಿವಯೋಗಿ ಸಿ. ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕರಾರಸಾನಿಗಮರವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು .
ಕೆ ಎಸ್ ಆರ್ ಟಿ ಸಿ ಎರಡು ಉಪಕ್ರಮಗಳಾದ ರಸ್ತೆ ಸುರಕ್ಷತೆ ಮತ್ತು ಸಿಮ್ಯುಲೇಟರ್ ಮೂಲಕ ಚಾಲನಾ ತರಬೇತಿ ಉಪಕ್ರಮಗಳಿಗೆ ಸ್ಕೋಚ್ ಮೊಬಿಲಿಟಿ ಮೂರು ಪ್ರಶಸ್ತಿಗಳು ಮತ್ತು ದೇಶದ ಉತ್ಕೃಷ್ಟ ಸಾರಿಗೆ ಉಪಕ್ರಮ ಪ್ರಶಸ್ತಿಗಳು ಲಭಿಸಿರುತ್ತವೆ.
56ನೇ ಸ್ಕೋಚ್ ಮೊಬಿಲಿಟಿ ಸಮ್ಮೇಳನದಲ್ಲಿ ಡಾ. ಎಂ.ರಾಮಚಂದ್ರನ್, ನಿವೃತ್ತ ಕಾರ್ಯದರ್ಶಿ, ಭಾರತ ಸರ್ಕಾರ ಹಾಗೂ ಡಾ.ಅರುಣಾ ಶರ್ಮ, ನಿವೃತ್ತ ಅಭಿವೃದ್ಧಿ ಆರ್ಥಿಕ ತಜ್ಞ , ಕಾರ್ಯದರ್ಶಿ, ಭಾರತ ಸರ್ಕಾರರವರು ಪ್ರಶಸ್ತಿ ಪ್ರದಾನ ಮಾಡಿದರು.
ದಿನಾಂಕ 01.03.2019 ರಿಂದ ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಕ.ರಾ.ರ.ಸಾ.ನಿಗಮವು, ದ್ವಿತೀಯ ಪಿ.ಯು.ಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಅಂದರೆ ದಿನಾಂಕ 01-03-2019 ರಿಂದ 18-03-2019 ರವರೆಗೆ ಪರೀಕ್ಷೆಗೆ ಹಾಜರಾಗುವ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ.
ಬೆಂಗಳೂರು-ಪಾಂಡಿಚೇರಿ ಮಾರ್ಗದಲ್ಲಿ ಹೊಸದಾಗಿ ನಾನ್ ಎ.ಸಿ ಸ್ಲೀಪರ್ ಸಾರಿಗೆಯನ್ನು ಕಾರ್ಯಾಚರಣೆ ಮಾಡುವ ಬಗ್ಗೆ.
ಕರ್ನಾಟಕ ರಾಜ್ಯ ರಸ್ತೆ ಸಾÀರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಪಾಂಡಿಚೇರಿ ಮಾರ್ಗದಲ್ಲಿ ಹೊಸದಾಗಿ ನಾನ್ ಎ.ಸಿ ಸ್ಲೀಪರ್ ಸಾರಿಗೆಯನ್ನು ಕಾರ್ಯಾಚರಣೆ ದಿನಾಂಕ 01-03-2019 ರಿಂದ ಮಾಡಲಾಗುತ್ತಿದೆ.
ಕೆಎಸ್ ಆರ್ ಟಿಸಿ ಹಾಗೂ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಡುವೆ ಅಂತರರಾಜ್ಯ ಸಾರಿಗೆ ಒಪ್ಪಂದ ಸಂಬಂಧದ ಮಾತುಕತೆಗೆ ಸುಮಾರು 11 ವರ್ಷಗಳ ನಂತರ ಶ್ರೀ.ಶಿವಯೋಗಿ ಸಿ.ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ಟಿಸಿರವರು ಇಂದು ಚಾಲನೆ ನೀಡಿದರು.
ಕೆಎಸ್ ಆರ್ ಟಿಸಿ ಹಾಗೂ ತಮಿಳುನಾಡು ರಾಜ್ಯಗಳ ಅಂತರರಾಜ್ಯ ಸಾರಿಗೆ ಒಪ್ಪಂದ ಸಂಬಂಧದ ಮಾತುಕತೆಗೆ ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ಟಿಸಿರವರು ದಿನಾಂಕ:15-02-2019 ರಂದು ಚಾಲನೆ ನೀಡಿದರು.
ನಿಗಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಿರ್ವಾಹಕರಿಗೆ ಬೆಳ್ಳಿ ಪದಕ ಪ್ರದಾನ ಹಾಗೂ ಬೆಂಗಳೂರು ಕೇಂದ್ರೀಯ ವಿಭಾಗದ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ.
ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ 2016-17ನೇ ರಲ್ಲಿ 8 ನಿರ್ವಾಹಕರಿಗೆ ಮತ್ತು 4 ಚಾಲಕ ಕಂ ನಿರ್ವಾಹಕರಿಗೆ ಹಾಗೂ 2017-18ರಲ್ಲಿ 23 ನಿರ್ವಾಹಕರಿಗೆ ಮತ್ತು 3 ಚಾಲಕ ಕಂ ನಿರ್ವಾಹಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಗಿದೆ.
ಕೆ ಎಸ್ ಆರ್ ಟಿಸಿಗೆ 225 ನೇ ಪ್ರಶಸ್ತಿ ಹಾಗೂ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ರಾಷ್ಟ್ರೀಯ ಪ್ರಶಸ್ತಿಗಳು-2019.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಂಸ್ಥೆಗಳು ಸಲ್ಲಿಸಿರುವ ಉಪಕ್ರಮಗಳನ್ನು ಗುರುತಿಸಿ ನೀಡುವ “ಪಿಆರ್ಸಿಐ ಎಕ್ಸಲೆನ್ಸ್” ಪ್ರಶಸ್ತಿಯು 3 ವರ್ಗಗಳಲ್ಲಿ ಲಭಿಸಿರುತ್ತದೆ.
ಕೆಎಸ್ ಆರ್ ಟಿಸಿ ಸಿಬ್ಬಂದಿಗಳ ಭವಿಷ್ಯ ನಿಧಿಯ(ಐಚ್ಛಿಕ ಭವಿಷÀ್ಯ ನಿಧಿ ಒಳಗೊಂಡಂತೆ) ವಾರ್ಷಿಕ ವಿವರಗಳು ಆನ್ಲೈನ್ನಲ್ಲಿ ಲಭ್ಯ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭವಿಷ್ಯ ನಿಧಿ ಕಾಯ್ದೆ-1952 ರ ರೀತ್ಯ ಎಲ್ಲಾ ನೌಕರರಿಗೂ ಭವಿಷ್ಯ ನಿಧಿ ಸೌಲಭ್ಯವನ್ನು ಒದಗಿಸುತ್ತಿದೆ.
ಶ್ರೀ.ಶಿವಯೋಗಿ ಸಿ. ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ಟಿಸಿ ಹಾಗೂ ಉಪಾಧ್ಯಕ್ಷರು, ಎಎಸ್ಆರ್ಟಿಯು ರವರು ದಿನಾಂಕ:31.01.2019 ರಂದು ನವದೆಹಲಿಯಲ್ಲಿರುವ ಎಎಸ್ಆರ್ಟಿಯು ಕೇಂದ್ರ ಕಛೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ, ಶ್ರೀ.ಶಿವಯೋಗಿ ಸಿ. ಕಳಸದ, ಭಾಆಸೇ, ಹಾಗೂ ಉಪಾಧ್ಯಕ್ಷರು, ಎಎಸ್ಆರ್ಟಿಯು ರವರು ಎಎಸ್ಆರ್ಟಿಯು ಸಂಸ್ಥೆಯ ಕಾರ್ಯಕ್ರಮಗಳು ಮತ್ತು ಉದ್ದೇಶಗಳ ಬಗ್ಗೆ ಅವಲೋಕನೆ ನಡೆಸಿ, ಸಂಸ್ಥೆಯು ರಾಜ್ಯ ರಸ್ತೆ ಸಾರಿಗೆಯನ್ನು ಅಭಿವೃದ್ಧಿಪಡಿಸುವಲ್ಲಿ ವಹಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.
ಗಣರಾಜ್ಯೋತ್ಸವ, ಅಪಘಾತ ರಹಿತ ಮತ್ತು ಅಪರಾಧ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ.
ಕರಾರಸಾನಿಗಮದ ಕೇಂದ್ರ ಕಛೇರಿಯಲ್ಲಿ ಶ್ರೀ.ಶಿವಯೋಗಿ.ಸಿ.ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, 70 ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದರು. ಸಮಸ್ತ ಸಿಬ್ಬಂದಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಗಣರಾಜ್ಯೋತ್ಸವದ ಪ್ರಯುಕ್ತ ಕರಾರಸಾ ನಿಗಮದ ವತಿಯಿಂದ 200 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ.
ದಿನಾಂಕ 26.01.2019 ರಂದು ಗಣರಾಜ್ಯೋತ್ಸವ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 25.01.2019 ಹಾಗೂ 26.01.2019 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 200 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ: 27.01.2019ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಮೂಲ ದಾಖಲಾತಿ ಮತ್ತು ದೇಹದಾಢ್ರ್ಯತೆ ಪರಿಶೀಲನೆಗೆ ಗೈರು ಹಾಜರಾದ ಅಭ್ಯರ್ಥಿಗಳು ದಿನಾಂಕ: 25-1-2019 ರಂದು ಮೂಲ ದಾಖಲಾತಿ ಮತ್ತು ದೇಹದಾಢ್ರ್ಯತೆಗೆ ಹಾಜರಾಗುವ ಬಗ್ಗೆ.
ಕೆ ಎಸ್ ಆರ್ ಟಿಸಿ ಯ 17 ವಿಭಾಗಗಳ ಒಟ್ಟು 283 ಅಪಘಾತರಹಿತ ಮತ್ತು ಅಪರಾಧರಹಿತ ಚಾಲಕರಿಗೆ ಗಣರಾಜ್ಯೋತ್ಸವದ ದಿನದಂದು ಬೆಳ್ಳಿ ಪದಕ ಪ್ರದಾನ.
ಕೆ ಎಸ್ ಆರ್ ಟಿಸಿ ಯು ಪ್ರತಿನಿತ್ಯ 8750 ಬಸ್ಸುಗಳಿಂದ, 28.95 ಲಕ್ಷ ಕಿ.ಮೀ ಕಾರ್ಯಾಚರಣೆ ಮಾಡುತ್ತಿದ್ದು, ದಿನಂಪ್ರತಿ 29 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ. ಪ್ರಯಾಣಿಕರ ಸುರಕ್ಷತೆ ನಮ್ಮ ಆದ್ಯತೆಯಾಗಿದೆ.
ನಿಗಮದ ಮುಂಗಡ ಬುಕ್ಕಿಂಗ್ ಕೌಂಟರ್ಗಳಿಗೂ ಅನಿರೀಕ್ಷಿತ ಭೇಟಿ ಮತ್ತು ತಪಾಸಣೆ ಹಾಗೂ ತಮಿಳುನಾಡಿನ ತಿರುಕೋಯಿಲೂರಿನಲ್ಲಿರುವ ಮುಂಗಡ ಟಿಕೇಟ್ ಕಾಯ್ದಿರಿಸುವ ಕೌಂಟರ್ನಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದ ಪ್ರಕರಣದ ಬಗ್ಗೆ.
ಸಾರ್ವಜನಿಕ ಪ್ರಯಾಣಿಕರಿಗೆ ಮುಂಗಡ ಟಿಕೇಟ್ ಕಾಯ್ದಿರಿಸಲು ಅನುಕೂಲವಾಗುವಂತೆ, ರಾಜ್ಯ ಹಾಗೂ ಅಂತರರಾಜ್ಯಗಳಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸುವ ಕೌಂಟರ್ಗಳು ನಿಗಮದ 129 ಮತ್ತು ಖಾಸಗಿ ಫ್ರಾಂಚೈಸ್ನ 599 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಶ್ರೀ. ಶಿವಯೋಗಿ ಸಿ ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ರವರು ಬೆಂಗಳೂರು ಕೇಂದ್ರೀಯ ವಿಭಾಗಕ್ಕೆ ದಿನಾಂಕ:11.01.2019ರಂದು ಭೇಟಿ ನೀಡಿ ವಿಭಾಗದ ಆರ್ಥಿಕ ಮತ್ತು ಭೌತಿಕ ಅಂಶಗಳ ಬಗ್ಗೆ ವಿಶ್ಲೇಷಣೆ ನಡೆಸಿದ್ದು, ಪ್ರಮುಖ ಅಂಶಗಳು .
ವಿಭಾಗೀಯ ಕಛೇರಿಯ ಕಟ್ಟಡವು ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ಕಛೇರಿಯ ಕಟ್ಟಡವು ಕೆಡವಲಾಗುವ ಸ್ಥಿತಿಯಲ್ಲಿದ್ದು, ಸಂಸ್ಥೆಯ ಸಿಬ್ಬಂದಿಗಳಿಗೆ ಕೆಲಸ ಮಾಡಲು ಸೂಕ್ತವಾಗಿರದ ಕಾರಣ ಕೂಡಲೇ ವಿಭಾಗೀಯ ಕಛೇರಿಯನ್ನು ನವೀಕರಿಸಲು/ದುರಸ್ಥಿಗೊಳಿಸಲು ಅಥವಾ ಸದರಿ ಸ್ಥಳದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿರುತ್ತಾರೆ.
10/01/2019 ರಂದು ಬೆಂಗಳೂರು- ವಿಜಯವಾಡ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ವಾಹನ ಸಂಖ್ಯೆ ಕೆ.ಎ.57 ಎಫ್-2844 ಅನ್ನು ಹೊಸಕೋಟೆ ಟೋಲ್ ಬಳಿ ತನಿಖೆ ಮಾಡಿದಾಗ ಸದರಿ ವಾಹನದ ಡಿಕ್ಕಿಯಲ್ಲಿ 04 ಬ್ಯಾಗ್ ಗಳಲ್ಲಿ ಅಂದಾಜು ರೂ.15ಲಕ್ಷ ಮೌಲ್ಯದ ಬೆಳ್ಳಿಯ ದೀಪಗಳನ್ನು ಅನಧಿಕೃವಾಗಿ ಸಾಗಿಸುತ್ತಿದ್ದು, ಇವುಗಳನ್ನು ವಶಕ್ಕೆ ಪಡೆದುಕೊಂಡು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಈ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಚಾಲಕ ಮತ್ತು ಚಾ/ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ.
ಕೆ ಎಸ್ ಆರ್ ಟಿ ಸಿ ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಶಿವಯೋಗಿ ಸಿ ಕಳಸದ ಭಾಆಸೇ, ರವರು ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳ ಮೂಲ ದಾಖಲಾತಿ ಮತ್ತು ದೇಹದಾಢ್ರ್ಯತೆ ಕೇಂದ್ರಕ್ಕೆ ಭೇಟಿ, ಪರಿವೀಕ್ಷಣೆ ಮತ್ತು ಅಭ್ಯರ್ಥಿಗಳೊಂದಿಗೆ ಮಾತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮದ ವತಿಯಿಂದ 500 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ.
ದಿನಾಂಕ 15.01.2019 ರಂದು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 11.01.2019 ಹಾಗೂ 12.01.2019 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಕೆ ಎಸ್ ಆರ್ ಟಿಸಿಯ ಚಿತ್ರದುರ್ಗ ವಿಭಾಗದ ನಿರ್ವಾಹಕರಾದ ಶ್ರೀ ಆರ್.ಶ್ರೀಧರ್ರವರ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಗಾಗಿ ನಗದು ಬಹುಮಾನದೊಂದಿಗೆ ಅಭಿನಂದನಾ ಸನ್ಮಾನ.
ಶ್ರೀ.ಆರ್.ಶ್ರೀಧರ್, ನಿರ್ವಾಹಕ ಬಿ.ಸಂ. 5153, ಶಿರಾ ಘಟಕ, ಚಿತ್ರದುರ್ಗ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ:08.01.2019ರಂದು ಅನುಸೂಚಿ ಸಂಖ್ಯೆ 71/72ರಲ್ಲಿ ಶಿರಾ-ಬೆಂಗಳೂರು-ಪಾವಗಡ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರೂ. 6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ.4,000/- ಇದ್ದ ಬ್ಯಾಗನ್ನು ಬಸ್ಸಿನಲ್ಲಿ ಬಿಟ್ಟು ಹೋಗಿರುತ್ತಾರೆ
ಜನವರಿ 09,2019ರಂದು ಬೆಂಗಳೂರು CIRT (Central Institute of Road Transport), ಪೂನರವರು ನಿರ್ವಹಿಸಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಭಾರತ ಸರ್ಕಾರ ರವರು ಆಯೋಜಿಸಿದ್ದು “CMVR Compliance of Vehicles” ತರಬೇತಿ ಕಾರ್ಯಕ್ರಮ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ/ಭಾರತ ಸರ್ಕಾರ, ಇವರು ಪ್ರಾಯೋಜಿಸಿದ “CMVR Compliance of Vehicles” ತರಬೇತಿ ಕಾರ್ಯಕ್ರಮವನ್ನು ಕೆಎಸ್ಆರ್ಟಿಸಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಯೋಗಿ ಸಿ. ಕಳಸದ, ಭಾಆಸೇ [ಉಪಾಧ್ಯಕ್ಷರು ASRTU(Association of State Road Transport Undertakings)]
ಕೆಎಸ್ ಆರ್ ಟಿಸಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಯೋಗಿ. ಸಿ. ಕಳಸದರವರು ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಬಂದ್ ನಿಮಿತ್ತ ಬಸ್ಸುಗಳ ಕಾರ್ಯಚರಣೇ ಕುರಿತು ಪರಿಶೀಲಿಸಿದರು .
ದರ್ಜೆ 3 ರ ಮೇಲ್ವಿಚಾರಕೇತರ ವಿವಿಧ ಹುದ್ದೆಗಳ ನೇಮಕಾತಿ .
ಕೆಎಸ್ ಆರ್ ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಶಿವಯೋಗಿ ಸಿ ಕಳಸದ, ಭಾಆಸೇ., ನಿಗಮದ ಕೇಂದ್ರ ಕಛೇರಿಯಲ್ಲಿ ಸಿಬ್ಬಂದಿಗಳೊಂದಿಗೆ ಇಂದು ಗಿಡ ನೆಡುವುದರ ಮೂಲಕ ಹೊಸ ವರ್ಷಕ್ಕೆ ಚಾಲನೆ ನೀಡಿದರು ಹಾಗೂ ಅಧಿಕಾರಿ/ಸಿಬ್ಬಂದಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.
ಶೈಕ್ಷಣಿಕ ರಂಗದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ನೌಕರ ಮತ್ತು ಅಧಿಕಾರಿಗಳ ಮಕ್ಕಳಿಗೆ ನೀಡುವ ನಗದು ಪುರಸ್ಕಾರದ ಮೊತ್ತವನ್ನು ಹೆಚ್ಚಿಸಿರುವ ಹಾಗೂ ಪ್ರಸಕ್ತ ವರ್ಷದಿಂದ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಶೇಕಡ 60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೂ ನಗದು ಪುರಸ್ಕಾರ.
ಕರಾರಸಾನಿಗಮದಲ್ಲಿ ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇಂತಹವುಗಳಲ್ಲಿ ಶೈಕ್ಷಣಿಕ ಶಿಕ್ಷಣದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ ನಗದು ಪುರಸ್ಕಾರ ನೀಡುವ ಯೋಜನೆಯು ಸಹ ಒಂದು ಉತ್ತಮ ಕಾರ್ಮಿಕ ಪರ ಯೋಜನೆಯಾಗಿರುತ್ತದೆ.
2019 ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ಪಾಸ್ಗಳ ವಿತರಣೆ/ನವೀಕರಣ.
2019 ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ಪಾಸ್ಗಳನ್ನು ವಿತರಣೆ/ನವೀಕರಣ ಮಾಡಬೇಕಿರುತ್ತದೆ. ವಿಕಲಚೇತನ ಫಲಾನುಭವಿಗಳಿಗೆ ನವೀಕರಿಸಿಕೊಳ್ಳಲು ಆಗಬಹುದಾದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಹಾಲಿ 2018 ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್ಪಾಸ್ಗಳನ್ನು ದಿನಾಂಕ: 28.02.2019 ರವರೆಗೆ ಅನುಮತಿಸಲಾಗುವುದು.
ಶ್ರೀ.ಶಿವಯೋಗಿ ಸಿ ಕಳಸದ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ ರವರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು.
ಚಾಲಕ / ನಿರ್ವಾಹಕ ವಿಶ್ರಾಂತಿ ಕೊಠಡಿಗಳಲ್ಲಿ ಬೆಡ್ ಗಳ ಸಂಖ್ಯೆ ಯನ್ನು ಹೆಚ್ಚಿಸುವುದು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಣಿಪಾಲ ಮಾರ್ಗದಲ್ಲಿ ಫ್ಲೈ ಬಸ್ ಸಾರಿಗೆಗಳನ್ನು ಕಾರ್ಯಾಚರಣೆ ಮಾಡುವ ಬಗ್ಗೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಈಗಾಗಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ 9 ಫ್ಲೈ ಬಸ್ ಸಾರಿಗೆಗಳು, ಮಡಿಕೇರಿಗೆ 2 ಫ್ಲೈ ಬಸ್ ಸಾರಿಗೆಗಳು, ಕುಂದಾಪುರಕ್ಕೆ ಒಂದು ಫ್ಲೈ ಬಸ್ ನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕರಾರಸಾ ನಿಗಮದ ವತಿಯಿಂದ 550 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ.
ದಿನಾಂಕ 25.12.2018 ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 21.12.2018 ಹಾಗೂ 22.12.2018 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 550 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಕರಾರಸಾ ನಿಗಮದ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪ್ರಕಟಿಸುವ ಕುರಿತು
ಕರಾರಸಾ ನಿಗಮದ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯ ಅಂತಿಮ ಪರಿಷ್ಕರಣೆ ಕೀ-ಉತ್ತರಗಳ ಪ್ರಕಟಣೆ.
ಕೆ ಎಸ್ ಆರ್ ಟಿಸಿ ಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ರೋಲಿಂಗ್ ಶೀಲ್ಡ್ನೊಂದಿಗೆ ಪ್ರಶಸ್ತಿ-2018.
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತೀ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಪ್ರಶಸ್ತಿಯು ಕೆಎಸ್ಆರ್ಟಿಸಿಗೆ ಲಭಿಸಿರುತ್ತದೆ. ನಿಗಮವು ಸತತ 4 ನೇ ಬಾರಿಗೆ ಸದರಿ ಪ್ರಶಸ್ತಿಯನ್ನು ಪಡೆಯುತ್ತಿದೆ.
ಶ್ರೀ.ಶಿವಯೋಗಿ ಸಿ. ಕಳಸದ, ಭಾ.ಆ.ಸೇ, ರವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ದಿನಾಂಕ: 01-12-2018 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ.
ಶ್ರೀ.ಶಿವಯೋಗಿ ಸಿ. ಕಳಸದ, ಭಾ.ಆ.ಸೇ, ರವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ದಿನಾಂಕ: 01-12-2018 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತಮಿಳುನಾಡಿನ ಮೇಲ್ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಸಾಂದರ್ಭಿಕ ಒಪ್ಪಂದದ ಮೇಲೆ ಬಸ್ಸುಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಿರುತ್ತದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತಮಿಳುನಾಡಿನ ಮೇಲ್ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಸಾಂದರ್ಭಿಕ ಒಪ್ಪಂದದ ಮೇಲೆ ಬಸ್ಸುಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಿರುತ್ತದೆ. ಈ ಸಂಬಂಧ ಭಕ್ತಾಧಿಗಳ ಅನುಕೂಲಕ್ಕಾಗಿ ಬೆಂಗಳೂರು ನಗರದಲ್ಲಿ ಕೆಂಪೆಗೌಡ ಬಸ್ ನಿಲ್ದಾಣದಲ್ಲಿ (ಮೊ.ಸಂ.7760990535), ಮೈಸೂರು ರಸ್ತೆ ಬಸ್ ನಿಲ್ದಾಣದ ಘಟಕ-5, 6 ಮತ್ತು ಶಾಂತಿನಗರದಲ್ಲಿರುವ ಘಟಕ-1, 2, 4 ರಲ್ಲಿ ವಿಶೇಷ ಕೌಂಟರ್ಗಳನ್ನು ತೆರೆಯಲಾಗಿರುತ್ತದೆ.
ಪತ್ರಿಕಾ ಪ್ರಕಟಣೆ-ಉಚಿತ ಭಾರಿ/ಲಘು ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿ.
ಉಚಿತ ಭಾರಿ/ಲಘು ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿ.
ಬೆಂಗಳೂರು-ಪಂಪಾ (ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 01/12/2018 ರಿಂದ ಹೊಸದಾಗಿ ಬೆಂಗಳೂರು-ಪಂಪಾ (ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ದಿನಾಂಕ 01.12.2018 ರಿಂದ ಬೆಂಗಳೂರು-ಮೈಸೂರು ನಡುವೆ ಕಾರ್ಯಾಚರಣೆ ಯಾಗುವ ಪ್ರತಿಷ್ಠಿತ ಸಾರಿಗೆಗಳನ್ನು ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-2ಕ್ಕೆ ವರ್ಗಾಯಿಸಿ ಕಾರ್ಯಾಚರಿಸಲಾಗುವುದು.
ಕೆಂಪೇಗೌಡ ಬಸ್ ನಿಲ್ದಾಣವನ್ನು ಇನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ನಿರ್ಗಮನ ಅಂಕಣಗಳನ್ನು ಈ ಕೆಳಕಂಡಂತೆ ಬದಲಾವಣೆ ಮಾಡಿ ದಿನಾಂಕ 01.12.2018 ರಿಂದ ನಿರ್ಗಮನಗಳನ್ನು ವರ್ಗಾಯಿಸಿ ಕಾರ್ಯಾಚರಿಸಲಾಗುವುದು.
ಕೆಎಸ್ಆರ್ ಟಿಸಿಗೆ ಪ್ರತಿಷ್ಠಿತ ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ Award of Excellence ಪ್ರಶಸ್ತಿ-2018
ಕೆಎಸ್ಆರ್ ಟಿಸಿಯು ಅನುಷ್ಠಾನ ಗೊಳಿಸಿರುವ ಯಶಸ್ವಿ ಉಪಕ್ರಮವಾದ ಸಣ್ಣ ಮತ್ತು ಮಧ್ಯಮ ನಗರ ಹಾಗೂ ಪಟ್ಟಣಗಳಲ್ಲಿ ನಗರ ಸಾರಿಗೆ ಸೇವೆಗೆ, ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ Award of Excellence ಪ್ರಶಸ್ತಿಯು ಲಭಿಸಿರುತ್ತದೆ.
63 ನೇ ಕನ್ನಡ ರಾಜ್ಯೋತ್ಸವ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗ ಘಟಕ 4 ರಲ್ಲಿ 63 ನೇ ಕನ್ನಡ ರಾಜ್ಯೋತ್ಸವ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು.
ಚಿಕ್ಕಮಾರನಹಳ್ಳಿ(ದೇವಸಂದ್ರ)-ಕಮ್ಮಖಂಡ್ರಿಗ ಮಾರ್ಗದಲ್ಲಿ ಸಾರಿಗೆಯನ್ನು ಕಾರ್ಯಾಚರಣೆ ಮಾಡುವ ಬಗ್ಗೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಚಿಕ್ಕಮಾರನಹಳ್ಳಿ(ದೇವಸಂದ್ರ) ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಚಿಕ್ಕಮಾರನಹಳ್ಳಿ(ದೇವಸಂದ್ರ)-ಕಮ್ಮಖಂಡ್ರಿಗ ಮಾರ್ಗದಲ್ಲಿ ಹೊಸದಾಗಿ ಸಾರಿಗೆಯನ್ನು ಈ ಕೆಳಕಂಡ ವೇಳಾಪಟ್ಟಿಯಂತೆ ಕಾರ್ಯಾಚರಣೆ ಮಾಡಲಾಗುತ್ತಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮದ ವತಿಯಿಂದ 1500 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ.
ದಿನಾಂಕ 06.11.2018 ರಂದು ನರಕ ಚತುರ್ದಶಿ ಹಾಗೂ ದಿನಾಂಕ 08.11.2018 ರಂದು ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 02.11.2018 ರಿಂದ 05.11.2018 ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 1500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
63ನೇ ಕನ್ನಡ ರಾಜ್ಯೋತ್ಸವ - ಸಿರಿಗನ್ನಡಂ ಗೆಲ್ಗೆ. ಸಿರಿಗನ್ನಡಂ ಬಾಳ್ಗೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ, 63 ನೇ ಕನ್ನಡ ರಾಜ್ಯೋತ್ಸವವನ್ನು, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಸ್.ಆರ್.ಉಮಾಶಂಕರ್, ಭಾ.ಆ.ಸೇ ರವರು ಕನ್ನಡಾಂಬೆ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿದರು.
ಕೆಎಸ್ಆರ್ ಟಿಸಿಗೆ ಪ್ರತಿಷ್ಠಿತ ಭಾರತ ಸರ್ಕಾರದ ಹೌಸಿಂಗ್ ಮತ್ತು ನಗರಾಭಿವೃದ್ಧಿ ಸಚಿವಾಲಯದ Award of Excellence ಪ್ರಶಸ್ತಿ-2018
ಕೆ ಎಸ್ ಆರ್ ಟಿಸಿ ಯು ಅನುಷ್ಠಾನ ಗೊಳಿಸಿರುವ ಯಶಸ್ವಿ ಉಪಕ್ರಮವಾದ ಸಣ್ಣ ಮತ್ತು ಮಧ್ಯಮ ನಗರ ಹಾಗೂ ಪಟ್ಟಣಗಳಲ್ಲಿ ನಗರ ಸಾರಿಗೆ ಸೇವೆಗೆ, ಭಾರತ ಸರ್ಕಾರದ ಹೌಸಿಂಗ್ ಮತ್ತು ನಗರಾಭಿವೃದ್ಧಿ ಇಲಾಖೆಯ Award of Excellence ಪ್ರಶಸ್ತಿಯು ಲಭಿಸಿರುತ್ತದೆ.
Read More...ಕ.ರಾ.ರ.ಸಾ.ನಿಗಮ CAT ಪರೀಕ್ಷೆ ಕೀ-ಉತ್ತರಗಳ ಬಗ್ಗೆ ಆಕ್ಷೇಪಣೆ
ಕೀ- ಉತ್ತರಗಳನ್ನು ಸಂಸ್ಥೆಯ ವೆಬ್-ಸೈಟ್ www.ksrtcjobs.com ಪ್ರಕಟಿಸಲಾಗಿದೆ
Read More...ಮೈಸೂರು ದಸರಾ-2018 ಮತ್ತು ದಸರಾ ರಜೆಗಳ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ಮೈಸೂರು ದಸರಾ-2018ನೇ ಸಾಲಿನ ದಸರಾ ಮಹೋತ್ಸವದ ಅಂಗವಾಗಿ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ವೇಗದೂತ, ಕರ್ನಾಟಕ ವೈಭವ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಸಾರಿಗೆ ಸೇವೆಗಳ ಜೊತೆಗೆ ಈ ಕೆಳಕಂಡಂತೆ ಹೆಚ್ಚುವರಿ ಬಸ್ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
Read More...ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ, ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಿದೇಹು.
ಮಾನ್ಯ ಸಾರಿಗೆ ಸಚಿವರಿಂದ, ನೂತನ ಬಸ್ಸುಗಳು ಹಾಗೂ ನೂತನ ಬಸ್ ಮಾರ್ಗಗಳ ಹಾಗೂ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮಗು ಪೋಷಣೆ ಕೊಠಡಿ “ತಾಯಿ ಮಡಿಲು” ಉದ್ಘಾಟನಾ ಸಮಾರಂಭ.
ದಿನಾಂಕ 15.09.2018ರಂದು ಶ್ರೀ.ಡಿ.ಸಿ.ತಮ್ಮಣ್ಣ, ಮಾನ್ಯ ಸಾರಿಗೆ ಸಚಿವರು, ಶ್ರೀ ಕೆ.ಎಸ್.ಈಶ್ವರಪ್ಪ, ಮಾನ್ಯ ಶಾಸಕರು, ಶಿವಮೊಗ್ಗ, ಶ್ರೀ ಎಸ್.ಕುಮಾರ್ ಬಂಗಾರಪ್ಪ, ಮಾನ್ಯ ಶಾಸಕರು, ಸೊರಬ, ರವರುಗಳು ಶಿವಮೊಗ್ಗದಲ್ಲಿ ನೂತನ ಬಸ್ಸುಗಳು ಹಾಗೂ ನೂತನ ಬಸ್ ಮಾರ್ಗಗಳ ಉದ್ಘಾಟನೆ ಹಾಗೂ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮಗು ಪೋಷಣೆ ಕೊಠಡಿ “ತಾಯಿ ಮಡಿಲು” ಉದ್ಘಾಟಿಸಿದರು.
ಗೌರಿ ಗಣೇಶ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ 1200 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ.
ಗೌರಿ ಗಣೇಶ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 11.09.2018 ಹಾಗೂ 12.09.2018 ರಂದು ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 1200 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ: 16.09.2018ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ
ಮಂಗಳೂರು, ಚಾಮರಾಜನಗರ ಮತ್ತು ಪುತ್ತೂರು ವಿಭಾಗಗಳಿಗೆ 833 ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
ಟಿಕೇಟ್ ಇಲ್ಲದೆ ಪ್ರಯಾಣಿಸಿದ 6263 ಪ್ರಯಾಣಿಕರಿಗೆ ದಂಡ.
ಜುಲೈ-2018 ರ ಮಾಹೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ.
ಕೆ ಎಸ್ ಆರ್ ಟಿಸಿ ಗೆ ನಾಗರಿಕ ಸ್ನೇಹಿ ರಾಜ್ಯ ಮಟ್ಟದ ಇ-ಆಡಳಿತ ಪ್ರಶಸ್ತಿಯೊಂದಿಗೆ, ರೂ.5 ಲಕ್ಷಗಳ ನಗದು ಪುರಸ್ಕಾರ.
31ನೇ ಆಗಸ್ಟ್ 2018, ವಿಧಾನಸೌಧ, ಬೆಂಗಳೂರು: ನಾಗರಿಕ ಸ್ನೇಹಿ ಇ-ಆಡಳಿತ ಯೋಜನೆಗಳನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಇಲಾಖೆಗಳ ಹಾಗೂ ಸಂಸ್ಥೆಗಳಿಗೆ ರಾಜ್ಯ ಮಟ್ಟದ ಇ-ಆಡಳಿತ ಪ್ರಶಸ್ತಿಯನ್ನು ಕೆಎಸ್ಆರ್ಟಿಸಿಯು ಅನುಷ್ಠಾನಗೊಳಿಸಿರುವ.
ನಿಗಮದ ಚಾಲಕ ಕಂ ನಿರ್ವಾಹಕರಾದ ಶ್ರೀ.ಜಯದೇವ, ಬಿಲ್ಲೆ ಸಂಖ್ಯೆ:2284 ಚಾಮರಾಜನಗರ ವಿಭಾಗ, ಕೊಳ್ಳೇಗಾಲ ಘಟಕ, ರವರು ಬಸ್ಸಿನಲ್ಲಿ ಬಿಟ್ಟು ಹೋದ ರೂ.2 ಲಕ್ಕ ಮೌಲ್ಯದ ಚಿನ್ನದ ಒಡವೆಗಳನ್ನು ಪ್ರಯಾಣಿಕರಿಗೆ ಒಪ್ಪಿಸಿರುವ ಬಗ್ಗೆ.
ನಿಗಮದ, ಚಾಮರಾಜನಗರ ವಿಭಾಗದ ,ಕೊಳ್ಳೇಗಾಲ ಘಟಕದ ಚಾಲಕ ಕಂ ನಿರ್ವಾಹಕನಾದ ಶ್ರೀ.ಜಯದೇವ ಬಿಲ್ಲೆ ಸಂಖ್ಯೆ 2284 ರವರು ದಿನಾಂಕ :26-08-2018 ರಂದು ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೊಳ್ಳೇಗಾಲದಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯದಲ್ಲಿ.
ಕೆ ಎಸ್ ಆರ್ ಟಿಸಿ ಯಿಂದ ಎ.ಸಿ.ಸ್ಲೀಪರ್, ಐರಾವತ ಹಾಗೂ ಐರಾವತ ಕ್ಲಾಬ್ ಕ್ಲಾಸ್ ಸಾರಿಗೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ರಸ್ತೆಯು ಹದಗೆಟ್ಟ ಕಾರಣ ದಿನಾಂಕ 27/28-8-2018 ಬೆಂಗಳೂರಿನಿಂದ ಕೇರಳ ರಾಜ್ಯದ ಕಣ್ಣಾನೂರಿಗೆ ಹಾಗೂ ಮುಂದಕ್ಕೆ ಚಲಿಸುವ ಎ.ಸಿ.ಸ್ಲೀಪರ್, ಐರಾವತ ಹಾಗೂ ಐರಾವತ ಕ್ಲಾಬ್ ಕ್ಲಾಸ್ ಸಾರಿಗೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಅದರ ವಿವರ ಈ ಕೆಳಕಂಡಂತಿದೆ.
ಮಡಿಕೇರಿಯಿಂದ ಪಣತ್ತೂರು, ಕರಿಕೆ, ಭಾಗಮಂಡಲ ಮಾರ್ಗವಾಗಿ ಸುಳ್ಯ ಮಾರ್ಗದಲ್ಲಿ 5 ಮಿನಿ ಬಸ್ಸುಗಳ ಸಾರಿಗೆ ಸೌಲಭ್ಯ ಕಲ್ಪಿಸಿರುವ ಬಗ್ಗೆ.
ಕೊಡಗು ಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ, ಗುಡ್ಡ ಕುಸಿತ ಮತ್ತು ರಸ್ತೆಯ ಭಾಗಗಳ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಮಡಿಕೇರಿಯಿಂದ ಸುಳ್ಯ ನೇರ ಮಾರ್ಗದಲ್ಲಿ ಕಲ್ಪಿಸಲಾಗಿದ್ದ ನಿಗಮದ ಸಾರಿಗೆಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಮಡಿಕೇರಿಯಿಂದ ಪಣತ್ತೂರು, ಕರಿಕೆ, ಭಾಗಮಂಡಲ ಮಾರ್ಗವಾಗಿ ಸುಳ್ಯ ಮಾರ್ಗದಲ್ಲಿ ಮಿನಿ ಬಸ್ಸುಗಳ ಸಾರಿಗೆ ಸೌಲಭ್ಯ ಕಲ್ಪಿಸಿರುವ ಬಗ್ಗೆ.
ಕ.ರಾ.ರ.ಸಾರಿಗೆ ನಿಗಮ, ಪುತ್ತೂರು ವಿಭಾಗದ ವತಿಯಿಂದ ಈ ಹಿಂದೆ ಮಡಿಕೇರಿಯಿಂದ ಸುಳ್ಯ ನಡುವಿನ ರಾಷ್ಟ್ರೀಕೃತ ನೇರ ಮಾರ್ಗದಲ್ಲಿ ಪ್ರಯಾಣಿಕರು/ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿತ್ತು ಮತ್ತು ಸದರಿ ಮಾರ್ಗದ ಅಂತರವು 51.0 ಕಿ.ಮೀ ಇರುತ್ತದೆ.
ಆಗಸ್ಟ್ 2018, ದಿನಾಂಕ 25 ಮತ್ತು 26 ರಂದು ನಡೆಸಲು ಉದ್ದೇಶಿಸಿದ್ದ ಕೆ ಎಸ್ ಆರ್ ಟಿ ಸಿ ಮೇಲ್ವಿಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ.
ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಕರಾವಳಿ, ಮಲೆನಾಡು, ಕೊಡಗು ಮತ್ತು ಇನ್ನಿತರೆ ಸ್ಥಳಗಳು ಪ್ರವಾಹದಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗಿವೆ.
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಒಟ್ಟು 1.16 ಲಕ್ಷ ಸಿಬ್ಬಂದಿಗಳ ಒಂದು ದಿನದ ವೇತನವನ್ನು ಅಂದಾಜು ರೂ.11.80 ಕೋಟಿಯನ್ನು "ಮುಖ್ಯ ಮಂತ್ರಿಯವರ ಪರಿಹಾರ ನಿದಿ ಪ್ರಕೃತಿ ವಿಕೋಪ ನಿಧಿ"ಗೆ ನೀಡುವ ಬಗ್ಗೆ
ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗಾಗಿ ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಒಟ್ಟು 1.16 ಲಕ್ಷ ಸಿಬ್ಬಂದಿಗಳ, ಆಗಸ್ಟ್ ತಿಂಗಳ, ಒಂದು ದಿನದ ವೇತನವನ್ನು ಅಂದಾಜು ರೂ.11.80 ಕೋಟಿಯನ್ನು.
ಶ್ರೀ. ಡಿ.ಸಿ ತಮ್ಮಣ್ಣ, ಮಾನ್ಯ ಸಾರಿಗೆ ಸಚಿವರ ನಿರ್ದೇಶನದ ಮೇರೆಗೆ ನಿಗಮವು ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿರುತ್ತದೆ. ಕೆ.ಎಸ್.ಆರ್.ಟಿ.ಸಿ - ‘’ ತುರ್ತು ಸ್ಪಂದನ ದಳ “ . ".
ಕರ್ನಾಟಕ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಮುಂದುವರೆದ ಭಾರಿ ಮಳೆ ಮತ್ತು ಗುಡ್ಡ ಕುಸಿತದ ಕಾರಣಗಳಿಂದ ರಸ್ತೆ ಸಂಚಾರ ಸ್ಥಗಿತಗೊಳಿಸಿದ ಹಿನ್ನಲೆಯಲ್ಲಿ ಬೆಂಗಳೂರು ಮತ್ತು ಇತರೇ ಸ್ಥಳಗಳಿಂದ ಈ ಪ್ರದೇಶಗಳಿಗೆ ಮತ್ತು ಈ ಪ್ರದೇಶಗಳಿಂದ ಬೆಂಗಳೂರು ಮತ್ತು ಇತರೇ ಸ್ಥಳಗಳಿಗೆ ನಿಗಮದಿಂದ ಕಾರ್ಯಾಚರಣೆ ಮಾಡುತ್ತಿದ್ದ ದೂರ ಮಾರ್ಗದ ಸಾರಿಗೆಗಳನ್ನು ಸ್ಥಗಿತಗೊಳಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ .
72ನೇ ಸ್ವಾತಂತ್ರ್ಯೋತ್ಸÀವವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಆರ್ ಉಮಾಶಂಕರ್, ಭಾ.ಆ.ಸೇ ರವರು ಧ್ವಜಾರೋಹಣ ನೆರವೇರಿಸಿದರು.
ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳ ನೇರ ನೇಮಕಾತಿಗಾಗಿ ಸಾಮಾನ್ಯ ಸಾಮಥ್ರ್ಯ ಪರೀಕ್ಷೆ ಹಾಜರಾಗಲು ಕರೆಪತ್ರಗಳನ್ನು ಮುದ್ರಿಸಿಕೊಳ್ಳುವ ಕುರಿತು.
ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳ ನೇರ ನೇಮಕಾತಿಗಾಗಿ ಸಾಮಾನ್ಯ ಸಾಮಥ್ರ್ಯ ಪರೀಕ್ಷೆ ಹಾಜರಾಗಲು ಕರೆಪತ್ರಗಳನ್ನು ಮುದ್ರಿಸಿಕೊಳ್ಳುವ ಕುರಿತು.
ಪ್ರಪ್ರಥಮ ಬಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುಪತಿ ಮಾರ್ಗದಲ್ಲಿ ಫ್ಲೈ ಬಸ್ ಸಾರಿಗೆ ಸೇವೆ ಪ್ರಾರಂಭ .
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಈಗಾಗಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಏಳು ಫ್ಲೈ ಬಸ್ ಸಾರಿಗೆಗಳು, ಎರಡು ಫ್ಲೈ ಬಸ್ ಸಾರಿಗೆಗಳನ್ನು ಮಡಿಕೇರಿಗೆ, ಒಂದು ಫೈ ಬಸ್ ಸಾರಿಗೆಯನ್ನು ಕುಂದಾಪುರಕ್ಕೆ ಹಾಗೂ ಒಂದು ಫೈ ಬಸ್ ಸಾರಿಗೆಯನ್ನು ಕೊಯಮತ್ತೂರಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ.
ಟಿಕೇಟ್ ಇಲ್ಲದೆ ಪ್ರಯಾಣಿಸಿದ 6033 ಪ್ರಯಾಣಿಕರಿಗೆ ದಂಡ.
ಜೂನ್-2018 ರ ಮಾಹೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ.
ಪತ್ರಿಕಾ ಗೋಷ್ಠಿ
ಉಚಿತ ವಾಹನ ಚಾಲನಾ ತರಬೇತಿ
ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರುಯಿಂದ- ತಿರುಪತಿ ಪ್ಯಾಕೇಜ್ ಟೂರ್ಗಳನ್ನು ದಿನಾಂಕ 20.07.2018 ರಿಂದ ಪ್ರಾರಂಭಿಸಲಾಗುತ್ತಿದೆ
ಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ತಿರುಪತಿ ಪ್ಯಾಕೇಜ್ಟೂರ್ನ್ನುಆಂಧ್ರ ಪ್ರದೇಶ ಪ್ರವಾಸಅಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿಜಂಟಿಯಾಗಿ12.05.2017ರಿಂದ ಪ್ರಾರಂಭಿಸಿತ್ತು.ಸಾರ್ವಜನಿಕರಿಂದಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರಿನಿಂದತಿರುಪತಿ-ತಿರುಮಲಕ್ಕೆಪ್ಯಾಕೇಜ್ .
ಪತ್ರಿಕಾ ಗೋಷ್ಠಿ.
ಮಂಗಳೂರು, ಚಾಮರಾಜನಗರ ಮತ್ತು ಪುತ್ತೂರು ವಿಭಾಗಗಳಿಗೆ 833 ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಸಂಭವನೀಯ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
ಕೆಎಸ್ ಆ ರ್ ಟಿಸಿಗೆ ‘India Bus Awards-2018’ ಸತತ 4ನೇ ಬಾರಿಗೆ ಈ ಪ್ರಶಸ್ತಿ.
6ನೇ ಜುಲೈ 2018, ಕೌಲಾಂಲಪೂರ್, ಮಲೇಶಿಯಾ: ಕೆಎಸ್ ಆ ರ್ ಟಿಸಿಯು ಅನುಷ್ಠಾನಗೊಳಿಸಿರುವ ಮಾಹಿತಿ ತಂತ್ರಜ್ಞಾನ, ಸುರಕ್ಷತಾ ಹಾಗೂ ಕಾರ್ಯಸ್ಥಳಗಳಲ್ಲಿನ ಆರೋಗ್ಯಕರ ಉಪಕ್ರಮಗಳಿಗೆ Operator for Passenger First Initiatives (State ) 2018 ವರ್ಗದಲ್ಲಿ ಪ್ರಶಸ್ತಿಯು ಲಭಿಸಿರುತ್ತದೆ.
ಹೊಸದಾಗಿ ನೇಮಕಗೊಂಡಿರುವ ದರ್ಜೆ-2 ಅಧಿಕಾರಿ ವರ್ಗದವರಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ.
ಶ್ರೀ. ಡಿ.ಸಿ ತಮ್ಮಣ್ಣ, ಮಾನ್ಯ ಸಾರಿಗೆ ಸಚಿವರು, ಶ್ರೀ.ಎಸ್.ಆರ್.ಉಮಾಶಂಕರ್, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಶ್ರೀ.ಕೆ.ಶ್ರೀನಿವಾಸ್ ನಿರ್ದೇಶಕರು (ಸಿಬ್ಬಂದಿ&ಪರಿಸರ), ಇನ್ನಿತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ದ್ವಿತೀಯ ಪಿ.ಯು.ಸಿ ಕಾಲೇಜಿನ ವಿದ್ಯಾರ್ಥಿಗಳಿಗೆ ದಿನಾಂಕ 11.06.2018 ರಿಂದ ಪಾಸುಗಳನ್ನು ವಿತರಣೆ
ಕರಾರಸಾನಿಗಮವು 2018-19 ನೇ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ಕಾಲೇಜಿನ ವಿದ್ಯಾರ್ಥಿಗಳಿಗೆ ದಿನಾಂಕ 11.06.2018 ರಿಂದ ಪಾಸುಗಳನ್ನು ವಿತರಣೆ.
ದಿನಾಂಕ:5.6.2018ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಕುರಿತು
ದಿನಾಂಕ:05-06-2018 ರಂದು ಸಂಜೆ 04.00 ಗಂಟೆಗೆ ಕರಾರಸಾ,ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ, 2ನೇ ಘಟಕದ ಆವರಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಡಾ.ಸಾಲುಮರದ ತಿಮ್ಮಕ್ಕ, ಶ್ರೀ.ಕೆ.ಶ್ರೀನಿವಾಸ್. ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ & ಪರಿಸರ), ಕರಾರಸಾ.
ಕ.ರಾ.ರ.ಸಾ.ನಿಗಮದಿಂದ 2018-19 ನೇ ಸಾಲಿಗಾಗಿ ವಿದ್ಯಾರ್ಥಿ ಬಸ್ಪಾಸ್ಗಳ ವಿತರಣೆ
ಕರಾರಸಾನಿಗಮವು 2018-19 ನೇ ಸಾಲಿನಲ್ಲಿ (1ನೇ ತರಗತಿ ಯಿಂದ 10ನೇತರಗತಿ) ಶಾಲಾ ವಿದ್ಯಾರ್ಥಿಗಳಿಗೆ ದಿನಾಂಕ 07.06.2018 ರಿಂದ ಪಾಸುಗಳನ್ನು ವಿತರಣೆ ಮಾಡಲಿದೆ.
Student Passes
Students of recognized schools / colleges are issued free / concessional passes to travel from their residence to the school / college within the limit of 60 Kms. Students are allowed to travel in Mofussil Ordinary, Express services, City and suburban services
Read More... Download Application
31.05.2018 ರಂದು ಕೆ ಎಸ್ ಆರ್ ಟಿಸಿಯಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆ (ತಂಬಾಕು -ಹೃದಯವನ್ನು ಒಡೆಯುವುದು, ಆರೋಗ್ಯವನ್ನು ಆಯ್ಕೆಮಾಡಿ - ತಂಬಾಕನ್ನಲ್ಲ)
ಕೆ ಎಸ್ ಆರ್ ಟಿಸಿ ಸಂಸ್ಥೆಯು ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡುವವರಿಂದ ಅಂದಾಜು 1,14,997 ಪ್ರಯಾಣಿಕರಿಂದ ರೂ.2.30ಕೋಟಿಯಷ್ಟು ದಂಡವನ್ನು ವಿಧಿಸಲಾಗಿದೆ.
ಅಧಿಸೂಚನೆ: 371 (ಜೆ) ಹೈದ್ರಾಬಾದ್-ಕರ್ನಾಟಕ ಮೀಸಲಾತಿ
ಅಧಿಸೂಚನೆ: 371 (ಜೆ) ಹೈದ್ರಾಬಾದ್-ಕರ್ನಾಟಕ ಮೀಸಲಾತಿ.
ಪತ್ರಿಕಾ ಗೋಷ್ಠಿ : ಅಧಿಕಾರಿ, ದರ್ಜೆ-2 ಆಂತರಿಕ ಹಾಗೂ ನೇರ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿರುವ ಬಗ್ಗೆ.
ಪತ್ರಿಕಾ ಗೋಷ್ಠಿ : ಅಧಿಕಾರಿ, ದರ್ಜೆ-2 ಆಂತರಿಕ ಹಾಗೂ ನೇರ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿರುವ ಬಗ್ಗೆ.
ಪತ್ರಿಕಾ ಗೋಷ್ಠಿ : ಉಚಿತ ವಾಹನ ಚಾಲನಾ ತರಬೇತಿ
ಪತ್ರಿಕಾ ಗೋಷ್ಠಿ : ಉಚಿತ ವಾಹನ ಚಾಲನಾ ತರಬೇತಿ
ಕೆಎಸ್ಆರ್ಟಿಸಿಯಿಂದ “ಒಪನ್ಡಾಟಾ” (ಮುಕ್ತ ದತ್ತಾಂಶ) ಕಾರ್ಯಕ್ರಮದಡಿಮೈಸೂರು ಬಸ್ ಆಚರಣೆಯಮಾಹಿತಿ- ಕೆಎಸ್ಆರ್ಟಿಸಿಯ ವಿನೂತನ ಪ್ರಯತ್ನ
ಕೆಎಸ್ಆರ್ಟಿಸಿಯಿಂದ “ಒಪನ್ಡಾಟಾ” (ಮುಕ್ತ ದತ್ತಾಂಶ) ಕಾರ್ಯಕ್ರಮದಡಿಮೈಸೂರು ಬಸ್ ಆಚರಣೆಯಮಾಹಿತಿ- ಕೆಎಸ್ಆರ್ಟಿಸಿಯ ವಿನೂತನ ಪ್ರಯತ್ನ
2ನೇ ಪಿಯುಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ
2ನೇ ಪಿಯುಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ
ಉಚಿತ ಭಾರಿ/ಲಘು ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿ .
ಉಚಿತ ಭಾರಿ/ಲಘು ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿ
ಚಾಲಕ-ಕಂ-ನಿರ್ವಾಹಕ ಹುದ್ದೆಯ ವೃತ್ತಿ ಪರೀಕ್ಷೆಗೆ ಹಾಜರಾಗಲು ಅಂತಿಮ ಅವಕಾಶ ನೀಡುತ್ತಿರುವ ಬಗ್ಗೆ .
ಚಾಲಕ-ಕಂ-ನಿರ್ವಾಹಕ ಹುದ್ದೆಯ ವೃತ್ತಿ ಪರೀಕ್ಷೆಗೆ ಹಾಜರಾಗಲು ಅಂತಿಮ ಅವಕಾಶ ನೀಡುತ್ತಿರುವ ಬಗ್ಗೆ
ಕೆಎಸ್ ಆರ್ ಟಿಸಿಗೆ ಪ್ರತಿಷ್ಠಿತ “India Pride ಪ್ರಶಸ್ತಿ -2018” ಸತತ ಮೂರನೇ ಬಾರಿಗೆ ಸದರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
28ನೇ ಮಾರ್ಚ್ 2018, ನವದೆಹಲಿ: “India Pride ಪ್ರಶಸ್ತಿ -2018” ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮತ್ತು ಸಾರಿಗೆ ಸೌಕರ್ಯದಲ್ಲಿನ ಗಣನೀಯ ಪ್ರಗತಿಗಾಗಿ ಕೆಎಸ್ ಆರ್ ಟಿಸಿಗೆ ಲಭಿಸಿರುತ್ತದೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾರಿಗೆ ಕಾರ್ಯಾಚರಣೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾರಿಗೆ ಕಾರ್ಯಾಚರಣೆ
ಮಹಾವೀರ ಜಯಂತಿ ಹಾಗೂ ಗುಡ್ಫ್ರೈಡೆ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ.
ಮಹಾವೀರ ಜಯಂತಿ ಹಾಗೂ ಗುಡ್ಫ್ರೈಡೆ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 28.03.2018 ರಿಂದ 31.03.2018 ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 800 ರಿಂದ 850 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಅಧಿಕಾರಿ, ದರ್ಜೆ-2 ಆಂತರಿಕ ಹಾಗೂ ನೇರ ಹುದ್ದೆಗಳ ಸಂಭವನೀಯ ಆಯ್ಕೆ ಪಟ್ಟಿ ಪ್ರಕಟಿಸಿರುವ ಬಗ್ಗೆ.
ಅಧಿಕಾರಿ, ದರ್ಜೆ-2 ಆಂತರಿಕ ಹಾಗೂ ನೇರ ಹುದ್ದೆಗಳ ಸಂಭವನೀಯ ಆಯ್ಕೆ ಪಟ್ಟಿ ಪ್ರಕಟಿಸಿರುವ ಬಗ್ಗೆ.
726 ತಾಂತ್ರಿಕ ಸಹಾಯಕ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಬಗ್ಗೆ.
726 ತಾಂತ್ರಿಕ ಸಹಾಯಕ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಬಗ್ಗೆ.
ಕೆ ಎಸ್ ಆರ್ ಟಿಸಿಗೆ ಪಿ ಆರ್ ಸಿಐ "ರಾಷ್ಟ್ರೀಯ ಚಾಣಕ್ಯ ಪ್ರಶಸ್ತಿ" ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿನ ಉತ್ತಮ ಉಪಕ್ರಮಗಳಿಗೆ ಎರಡು ವರ್ಗಗಳಲ್ಲಿ "ಕಾರ್ಪೋರೇಟ್ ಕೋಲ್ಯಾಟರಲ್ ಪ್ರಶಸ್ತಿ"-2018
ದಿನಾಂಕ:9ನೇ ಮತ್ತು 10ನೇ ಮಾರ್ಚ್2018: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಂಸ್ಥೆಗಳು ಸಲ್ಲಿಸಿರುವ ಕೊಡುಗೆಗಳನ್ನು ಗುರುತಿಸಿ ನೀಡುವ ‘’Communication Idea of the year’’ ಪ್ರಶಸ್ತಿ.
ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿಗಮದ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿದೆ, ದ್ವಿಚಕ್ರ ವಾಹನಗಳು & ನಿಗಮದ ಬಸ್ಸುಗಳ ನಡುವೆ ಅತ್ಯಧಿಕ ಸಂಖ್ಯೆಗಳಲ್ಲಿ ಅಪಘಾತಕ್ಕೆ ಒಳಗಾಗುತ್ತಿದ್ದು,
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಕ.ರಾ.ರ.ಸಾ.ನಿಗಮವು, ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಅಂದರೆ ದಿನಾಂಕ 23-03-2018 ರಿಂದ 06-04-2018 ರವರೆಗೆ ಪರೀಕ್ಷೆಗೆ ಹಾಜರಾಗುವ ಎಲ್ಲಾ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಮತ್ತು ವಾಸಸ್ಥಳಕ್ಕೆ ಹಿಂದಿರುಗುವಾಗ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
19-03-2018 ರಂದು ನಡೆಯಬೇಕಾಗಿದ್ದ ಚಾಲನಾ ವೃತ್ತಿ ಪರೀಕ್ಷೆಯ ದಿನಾಂಕಗಳನ್ನು ರದ್ಧುಪಡಿಸಿದ್ದು, ಮತ್ತು ಪರಿಷ್ಕೃತ ಕರೆ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ.
ಟಿಕೇಟ್ ಇಲ್ಲದೆ ಪ್ರಯಾಣಿಸಿದ 6152 ಪ್ರಯಾಣಿಕರಿಗೆ ದಂಡ
ಜನವರಿ-2018 ರ ಮಾಹೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ
ಕೆ ಎಸ್ ಆರ್ ಟಿಸಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ದಿನಾಂಕ 08-03-2018 ಬೆಳಗ್ಗೆ 11:30 ಗಂಟೆಗೆ, ಕೆ ಎಸ್ ಆರ್ ಟಿಸಿ ಕೇಂದ್ರ ಕಛೇರಿ ಹಿಂಭಾಗ, ಬೆಂಗಳೂರು ಕೇಂದ್ರೀಯ ವಿಭಾಗದ 4ನೇ ಘಟಕದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಂಗಳೂರು, ಚಾಮರಾಜನಗರ ಮತ್ತು ಪುತ್ತೂರು ವಿಭಾಗಗಳಿಗೆ ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಪ್ರತ್ಯೇಕ ನೇಮಕಾತಿ ಸಂಬಂಧ 9377 ಚಾಲಕ-ಕಂ-ನಿರ್ವಾಹಕ ಅಭ್ಯರ್ಥಿಗಳು ಚಾಲನಾ ವೃತ್ತಿ ಪರೀಕ್ಷಗೆ ಹಾಜರಾಗುವ ಕುರಿತು..
ಪತ್ರಿಕಾ ಗೋಷ್ಠಿ ಆಹ್ವಾನರೆ
ಕೆಎಸ್ಆರ್ಟಿಸಿ ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಸ್.ಆರ್.ಉಮಾಶಂಕರ್ ಭಾಆಸೇ., ರವರು ದೇಶದ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ
ಶ್ರೀ.ಎಸ್.ಆರ್.ಉಮಾಶಂಕರ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು ಕೆಎಸ್ಆರ್ಟಿಸಿ ರವರು ಎಎಸ್ಆರ್ಟಿಯು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ದಿನಾಂಕ:28/02/2018 ರಂದು ನವದೆಹಲಿಯಲ್ಲಿ ನಡೆದ ಎಎಸ್ಆರ್ಟಿಯುವಿನ 52ನೇ ಸಾಮಾನ್ಯ ಸಭೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳು
ಕೆಎಸ್ಆರ್ಟಿಸಿ ಗೆ ಜಾಗತಿಕ ಮನ್ನಣೆ IRU ಅಂತರರಾಷ್ಟ್ರೀಯ ರಸ್ತೆ ಸಾರಿಗೆ ಯೂನಿಯನ್ ಬಸ್ ಎಕ್ಸೆಲೆನ್ಸ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದ ದೇಶದ ಮೊದಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ –ಕೆಎಸ್ಆರ್ಟಿಸಿ
ಕೆಎಸ್ಆರ್ಟಿಸಿ ಗೆ ಮೊಟ್ಟ ಮೊದಲ ಬಾರಿಗೆ ಅಂತರರಾಷ್ಟ್ರೀಯ ಸಾರಿಗೆ ಯೂನಿಯನ್ ಬಸ್ ಎಕ್ಸಲೆನ್ಸ್ ರನ್ನರ್ ಅಪ್ ಪ್ರಶಸ್ತಿಯು ಲಭಿಸುವುದರೊಂದಿಗೆ IRU ಅಂತರರಾಷ್ಟ್ರೀಯ ರಸ್ತೆ ಸಾರಿಗೆ ಯೂನಿಯನ್ ಬಸ್ ಎಕ್ಸೆಲೆನ್ಸ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದ ದೇಶದ ಮೊದಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಾಗಿ ಕೆಎಸ್ಆರ್ಟಿಸಿ ಹೊರಹೊಮ್ಮಿದೆ.
ಪತ್ರಿಕಾ ಪ್ರಕಟಣೆ
ದಿನಾಂಕ 01.03.2018 ಕರ್ನಾಟಕ ರಾಜ್ಯದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳು ಪ್ರಾರಂಭವಾಗುತ್ತಿದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಇತರೆ ವಿದ್ಯಾಸಂಸ್ಥೆಗಳಲ್ಲಿ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿರುವುದಾಗಿ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆಯವರು ತಿಳಿಸಿರುತ್ತಾರೆ.
ಕೆಎಸ್ಆರ್ಟಿಸಿ ಕರ್ತವ್ಯ ಸ್ಥಳದಲ್ಲಿ ಆರೋಗ್ಯಕರ ಉಪಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯದ ಉತ್ತಮ ಉಪಕ್ರಮಗಳ ಪ್ರಶಸ್ತಿ ಮತ್ತು ನಗದು ಬಹುಮಾನ ರೂ.75,000/- ಪ್ರದಾನ
ಕೆಎಸ್ಆರ್ಟಿಯು ಅನುಷ್ಠಾನಗೊಳಿಸಿರುವ ಕರ್ತವ್ಯದ ಸ್ಥಳದಲ್ಲಿನ ಆರೋಗ್ಯಕರ ಉಪಕ್ರಮಗಳಿಗಾಗಿ ಕರ್ನಾಟಕ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆ ನೀಡುವ ರಾಜ್ಯ ಉತ್ತಮ ಉಪಕ್ರಮಗಳ ಪ್ರಶಸ್ತಿಯನ್ನು ಪಡೆದಿರುತ್ತದೆ. ನಿಗಮದ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಬಯಲು ಮುಕ್ತ ಶೌಚ, ಕರ್ತವ್ಯದ ಮೇಲೆ ತೆರಳುವ ಸಿಬ್ಬಂದಿಗಳಿಗೆ ಮದ್ಯಪಾನ ತಪಾಸಣೆ, ಕರ್ತವ್ಯದ ಸ್ಥಳದಲ್ಲಿ ಮದ್ಯಪಾನ ನಿಷೇಧ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ಸದರಿ ಪ್ರಶಸ್ತಿಯು ಲಭಿಸಿರುತ್ತದೆ.
ಗೊಮ್ಮಟೇಶ್ವರ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ – 2018 ಕೆಎಸ್ಆರ್ಟಿಸಿ ವಿಶೇಷ ಸೌಲಭ್ಯಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ನಿಗಮವೆಂದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದೆ. ಕ.ರಾ.ರ.ಸಾ. ನಿಗಮವು 8800 ಬಸ್ಗಳಿಂದ 8150 ಅನುಸೂಚಿಗಳನ್ನು 37831 ಸಿಬ್ಬಂದಿಗಳಿಂದ ಪ್ರತಿನಿತ್ಯ 27.1 ಲಕ್ಷ ಕಿ.ಮೀ. ಗಳನ್ನು ಕಾರ್ಯಾಚರಣೆ ಮಾಡಿ ಸುಮಾರು 26.5 ಲಕ್ಷ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಮತ್ತು ಸುರಕ್ಷಿತ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಮೊದಲ ಬಾರಿಗೆ ಕೆಎಸ್ಆರ್ಟಿಸಿ ನಡೆಸಿದ ಆನ್ ಲೈನ್ CAT ಪರೀಕ್ಷೆ ಮೂಲಕ ಸಂಪೂರ್ಣ ಪಾರದರ್ಶಕ ನೇಮಕಾತಿಯಡಿ ಆಯ್ಕೆಗೊಂಡಿರುವ ಮೇಲ್ವಿಚಾರಕ ಸಿಬ್ಬಂದಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಶ್ರೀ.ಹೆಚ್.ಎಂ.ರೇವಣ್ಣ, ಮಾನ್ಯ ಸಾರಿಗೆ ಸಚಿವರು, ಶ್ರೀ.ಕೆ.ಗೋಪಾಲ ಪೂಜಾರಿ, ಮಾನ್ಯ ಅಧ್ಯಕ್ಷರು ಕೆಎಸ್ಆರ್ಟಿಸಿ ಹಾಗೂ ಶಾಸಕರು, ಶ್ರೀ ಬಸವರಾಜ್ ಬುಳ್ಳಾ, ಮಾನ್ಯ ಉಪಾಧ್ಯಕ್ಷರು, ಕೆಎಸ್ಆರ್ಟಿಸಿ, ಶ್ರೀ.ಎಸ್.ಆರ್.ಉಮಾಶಂಕರ್, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಶ್ರೀ.ಕೆ.ಶ್ರೀನಿವಾಸ್ ನಿರ್ದೇಶಕರು (ಸಿಬ್ಬಂದಿ&ಪರಿಸರ), ಮಂಡಳಿ ನಿರ್ದೇಶಕರುಗಳು ಪಾಲ್ಗೊಂಡಿದ್ದರು.
ಮೊದಲಬಾರಿಗೆ ಕೆಎಸ್ಆರ್ಟಿಸಿ, Online CAT ಪರೀಕ್ಷೆ ಮೂಲಕ ನೇಮಕಗೊಂಡಿರುವ ಮೇಲ್ವಿಚಾರಕ ಸಿಬ್ಬಂದಿಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ದಿನಾಂಕ 02.02.2018ರಂದು ಬೆಳಗ್ಗೆ 11.00ಗಂಟೆಗೆ ಕರಾರಸಾ,ನಿಗಮದ ಕೇಂದ್ರ ಕಛೇರಿಯ ಆಡಿಟೋರಿಯಂನಲ್ಲಿ ಹೊಸದಾಗಿ Online CAT ಪರೀಕ್ಷೆಯಲ್ಲಿ ನೇಮಕಗೊಂಡಿರುವ ಮೇಲ್ವಿಚಾರಕ ಸಿಬ್ಬಂದಿಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ಶ್ರೀ.ಹೆಚ್.ಎಂ.ರೇವಣ್ಣ, ಮಾನ್ಯ ಸಾರಿಗೆ ಸಚಿವರು, ನೆರವೇರಿಸಲಿದ್ದಾರೆ
ದಿನಾಂಕ 24.12.2017 ರಂದು ಅಧಿಕಾರಿ, ದರ್ಜೆ-2 ಹುದ್ದೆಗಳಿಗೆ ನಡೆದ Online CAT ಪರೀಕ್ಷೆಯ ಕೀ ಉತ್ತರಗಳಿಗೆ, ಅಭ್ಯರ್ಥಿಗಳಿಂದ ಸ್ವೀಕರಿಸಿದ ಆಕ್ಷೇಪಣೆಗಳಿಗೆ ಸ್ಪಂದಿಸಿ, ಪರಿಷ್ಕೃತ ಕೀ ಉತ್ತರಗಳನ್ನು ಸಂಸ್ಥೆಯ ವೆಬ್-ಸೈಟ್ www.ksrtcjobs.com ನಲ್ಲಿ ಪ್ರಕಟಿಸಲಾಗಿದೆ.
AITUC ಕಾರ್ಮಿಕ ಸಂಘಟನೆಯವರು ಅನಿರ್ದಿಷ್ಟವಾಧಿ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿರುವ ಬಗ್ಗೆ
ಶ್ರೀ.ಎಚ್.ಎಂ.ರೇವಣ್ಣ, ಮಾನ್ಯ ಸಾರಿಗೆ ಸಚಿವರ ಆದೇಶದ ಮೇರೆಗೆ, ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಸ್.ಆರ್.ಉಮಾಶಂಕರ್.
ಗಣರಾಜ್ಯೋತ್ಸವ ಸಮಾರಂಭ ಹಾಗೂ ಮೊದಲ ಬಾರಿಗೆ ಕೆಎಸ್ಆರ್ಟಿಸಿ ಭದ್ರತಾ ಮತ್ತು ಜಾಗೃತದಳದ ಸಿಬ್ಬಂದಿಗಳ ತಂಡವು ಮಾಣಿಕ್ ಷಾ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಪೆರೇಡ್ನಲ್ಲಿ ಭಾಗವಹಿಸಿದ್ದರು
ಶೈಕ್ಷಣಿಕ ರಂಗದಲ್ಲಿ ಕರಾರಸಾನಿಗಮದ ನೌಕರರು ಮತ್ತು ಅಧಿಕಾರಿಗಳ ಮಕ್ಕಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಎಸ್ಎಸ್ಎಲ್ಸಿ, ದ್ವೀತೀಯ ಪಿಯುಸಿಯ ಪರೀಕ್ಷೆಯಲ್ಲಿ ಶೇಕಡ 70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮತ್ತು ಪದವಿ ಪರೀಕ್ಷೆಯಲ್ಲಿ ಶೇಕಡ 60 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ನಿಗಮದ ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ ಗರಿಷ್ಟ ರೂ.4000/-
ಟಿಕೇಟ್ ಇಲ್ಲದೆ ಪ್ರಯಾಣಿಸಿದ 5697 ಪ್ರಯಾಣಿಕರಿಗೆ ದಂಡ
ಡಿಸೆಂಬರ್-2017 ರ ಮಾಹೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 47866 ವಾಹನಗಳನ್ನು ತನಿಖೆಗೊಳಪಡಿಸಿ 5027 ಪ್ರಕರಣಗಳನ್ನು ಪತ್ತೆಹಚ್ಚಿ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರತ್ಯೇಕವಾಗಿ ವಿತರಿಸಲಾಗುತ್ತಿರುವ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆಯನ್ನು ನಿಲ್ಲಿಸಿದ್ದು,ಈ ಕೆಳಕಂಡ ಯಾವುದಾದರೊಂದು ಗುರುತಿನ ಚೀಟಿಯನ್ನು ತೋರಿಸಿ ಹಿರಿಯ ನಾಗರಿಕರು ಟಿಕೆಟ್ ರಿಯಾಯಿತಿ ¥ಡೆದು ಪ್ರಯಾಣಿಸಬಹುದಾಗಿದೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ, ಹೊರವಲಯ, ಸಾಮಾನ್ಯ, ವೇಗದೂತ, ಅರೆ ಸುವಿಹಾರಿ ಮತ್ತು ರಾಜಹಂಸ ಬಸ್ಸುಗಳಲ್ಲಿ 60 ವರ್ಷ ಪೂರ್ಣಗೊಂಡಿರುವ ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನ ಕರ್ನಾಟಕ ರಾಜ್ಯದ ಹಿರಿಯ ನಾಗರಿಕರಿಗೆ ಟಿಕೆಟ್ ಪ್ರಯಾಣ ದರದಲ್ಲಿ ಶೇ.25 ರಿಯಾಯಿತಿ ಸೌಲಭ್ಯ ಒದಗಿಸಲಾಗಿದೆ.
ಕೆಎಸ್ಆರ್ಟಿಸಿಯ 15 ವಿಭಾಗಗಳ ಒಟ್ಟು 588 ಅಪಘಾತರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಲು ಮಾನ್ಯ ಸಾರಿಗೆ ಸಚಿವರ ಆದೇಶ
ನಿಗಮದಲ್ಲಿ 1982ನೇ ಸಾಲಿನಿಂದ ಅಪಘಾತರಹಿತ ಮತ್ತು ಅಪರಾಧರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ.
ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ, “ ಗೋಲ್ಡನ್ ಅವರ್” ಟ್ರಸ್ಟ್ ರವರೊಂದಿಗೆ ಒಡಂಬಡಿಕೆ ಸಹಿ ಮತ್ತು ಪ್ರಥಮ ಚಿಕಿತ್ಸಾ ಕಿಟ್ಗಳ ವಿತರಣಾ
ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ, “ಗೋಲ್ಡನ್ ಅವರ್” ಟ್ರಸ್ಟ್ ರವರೊಂದಿಗೆ ಒಡಂಬಡಿಕೆ ಸಹಿ ಮತ್ತು ಪ್ರಥಮ ಚಿಕಿತ್ಸಾ ಕಿಟ್ಗಳ ವಿತರಣಾ ಸಮಾರಂಭವನ್ನು ಶ್ರೀ. ಹೆಚ್.ಎಂ.ರೇವಣ್ಣ, ಮಾನ್ಯ ಸಾರಿಗೆ ಸಚಿವರು, ಡಾ.ಎನ್.ಕೆ.ವೆಂಕಟರಮಣ,
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 12.01.2018 ರಿಂದ 13.01.2018 ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 250 ರಿಂದ 300 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
86 ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ, "ಗೋಲ್ಡನ್ ಅವÀರ್" ಟ್ರಸ್ಟ್ ರವರೊಂದಿಗೆÉ ಒಡಂಬಡಿಕೆ ಸಹಿ ಪ್ರಥಮ , ಚಿಕಿತ್ಸಾ ಕಿಟ್ಗಳ ವಿತರಣಾ ಹಾಗೂ ತುರ್ತು ವೈದ್ಯಕೀಯ ನಿರ್ವಹಣಾ ತರಬೇತಿ ಕಾರ್ಯಾಗಾರಕ್ಕೆ ಚಾಲನೆ.
ದಿನಾಂಕ 12.01.2018ರಂದು ಬೆಳಗ್ಗೆ 11.30ಗಂಟೆಗೆ ಕರಾರಸಾ,ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ, 4ನೇ ಘಟಕದ (ಕೆಎಸ್ಆರ್ಟಿಸಿ, ಕೇಂದ್ರ ಕಛೇರಿ ಹಿಂಭಾಗ) ಆವರಣದಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ, “ಗೋಲ್ಡನ್ ಅವರ್” ಟ್ರಸ್ಟ್ ರವರೊಂದಿಗೆ ಒಡಂಬಡಿಕೆ ಸಹಿ ಮತ್ತು ಪ್ರಥಮ ಚಿಕಿತ್ಸಾ ಕಿಟ್ಗಳ ವಿತÀರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ನೂತನ ಫ್ಲೈಬಸ್ಸುಗಳ ಉದ್ಘಾಟನಾ ಸಮಾರಂಭವನ್ನು ಬೆಂಗಳೂರು ಕೇಂದ್ರೀಯ ವಿಭಾಗದ, 4ನೇ ಘಟಕದ (ಕೆಎಸ್ಆರ್ಟಿಸಿ, ಕೇಂದ್ರ ಕಛೇರಿ ಹಿಂಭಾಗ) ಹಮ್ಮಿಕೊಳ್ಳಲಾಗಿತ್ತು
ದೇಶದಲ್ಲಿ ಮೊದಲ ಬಾರಿಗೆ ಅಂತರರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದು ಅಂತರರಾಜ್ಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಪರ್ಕ ಕಲ್ಪಿಸುವ ಬಸ್ ಸೇವೆ - ಫ್ಲೈಬಸ್ಸು.
ನೂತನ ಫ್ಲೈಬಸ್ಸುಗಳ ಉದ್ಘಾಟನಾ ಸಮಾರಂಭವನ್ನು ಬೆಂಗಳೂರು ಕೇಂದ್ರೀಯ ವಿಭಾಗದ, 4ನೇ ಘಟಕದ (ಕೆಎಸ್ಆರ್ಟಿಸಿ, ಕೇಂದ್ರ ಕಛೇರಿ ಹಿಂಭಾಗ) ಹಮ್ಮಿಕೊಳ್ಳಲಾಗಿದೆ.
ಕರ್ದಿನಾಂಕ 08.01.2018ರಂದು ಸಂಜೆ 04.00 ಗಂಟೆಗೆ ಕರಾರಸಾ,ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ, 4ನೇ ಘಟಕದ (ಕೆಎಸ್ಆರ್ಟಿಸಿ, ಕೇಂದ್ರ ಕಛೇರಿ ಹಿಂಭಾಗ) ಆವರಣದಲ್ಲಿ ನೂತನ ಫ್ಲೈಬಸ್ಸುಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕೆಎಸ್ಆರ್ಟಿಸಿವತಿಯಿಂದ ಮೇಲ್ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಒಪ್ಪಂದದ ಮೇಲೆ ಬಸ್ಸುಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತಮಿಳುನಾಡಿನ ಮೇಲ್ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಸಾಂದರ್ಭಿಕ ಒಪ್ಪಂದದ ಮೇಲೆ ಬಸ್ಸುಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಿರುತ್ತದೆ. ಈ ಸಂಬಂಧ ಭಕ್ತಾಧಿಗಳ ಅನುಕೂಲಕ್ಕಾಗಿ ಬೆಂಗಳೂರು ನಗರದಲ್ಲಿ ಕೆಂಪೆಗೌಡ ಬಸ್ ನಿಲ್ದಾಣ
ಪತ್ರಿಕಾ ಪ್ರಕಟಣೆ
ಬೆಂಗಳೂರು-ಪಾಂಡಿಚೇರಿ ಮಾರ್ಗದಲ್ಲಿ ರಾಜಹಂಸ ವಾಹನವನ್ನು ದಿನಾಂಕ 04/01/2018 ರಿಂದ ಕಾರ್ಯಾಚರಣೆ ಮಾಡುವ ಬಗ್ಗೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 04/01/2018 ರಿಂದ ಹೊಸದಾಗಿ ಬೆಂಗಳೂರು-ಪಾಂಡಿಚೇರಿ ಮಾರ್ಗದಲ್ಲಿ ರಾಜಹಂಸ ವಾಹನವನ್ನು .
ಕೆಎಸ್ಆರ್ಟಿಸಿಯಲ್ಲಿ ವಿಶೇಷ ಸಾಧನೆಗೈದ ಭದ್ರತಾ ಮತ್ತು ಜಾಗೃತಾ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ ಚಿನ್ನ ಮತ್ತು ಬೆಳ್ಳಿಯ ಪದಕ ಮತ್ತು ಚಾಮರಾಜನಗರ ವಿಭಾಗದ ಚಾಲಕರಾದ ಶ್ರೀ.ಚಿನ್ನಸ್ವಾಮಿರವರಿಗೆ ಚಿನ್ನದ ಪದಕ ಪ್ರದಾನ ಸಮಾರಂಭ
ಕೆಎಸ್ಆರ್ಟಿಸಿಯಲ್ಲಿ ವಿಶೇಷ ಸಾಧನೆಗೈದ ಭದ್ರತಾ ಮತ್ತು ಜಾಗೃತಾ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ ಚಿನ್ನ ಮತ್ತು ಬೆಳ್ಳಿಯ ಪದಕ ಮತ್ತು ಚಾಮರಾಜನಗರ ವಿಭಾಗದ ಚಾಲಕರಾದ ಶ್ರೀ.ಚಿನ್ನಸ್ವಾಮಿರವರಿಗೆ ಚಿನ್ನದ ಪದಕ ಪ್ರದಾನ ಸಮಾರಂಭವನ್ನು ಶ್ರೀ. ಹೆಚ್.ಎಂ.ರೇವಣ್ಣ, ಮಾನ್ಯ ಸಾರಿಗೆ ಸಚಿವರು, ಶ್ರೀ.ಕೆ.ಗೋಪಾಲ ಪೂಜಾರಿ, ಮಾನ್ಯ ಶಾಸಕರು ಮತ್ತು ಅಧ್ಯಕ್ಷರು,
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 22.12.2017 ರಿಂದ 23.12.2017ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 500 ರಿಂದ 550 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
2018 ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ಪಾಸ್ಗಳನ್ನು ವಿತರಣೆ/ನವೀಕರಣ
2018 ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ಪಾಸ್ಗಳನ್ನು ವಿತರಣೆ/ನವೀಕರಣ ಮಾಡಬೇಕಿರುತ್ತದೆ. ವಿಕಲಚೇತನ ಫಲಾನುಭವಿಗಳಿಗೆ ನವೀಕರಿಸಿಕೊಳ್ಳಲು ಆಗಬಹುದಾದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಹಾಲಿ 2017 ನೇ .
ಕೆಎಸ್ಆರ್ಟಿಸಿಗೆ ಪ್ರತಿಷ್ಠಿತ Business World Smart Cities ರಾಷ್ಟ್ರೀಯ ಪ್ರಶಸ್ತಿ-2017
ದಿನಾಂಕ 20ನೇ ಡಿಸೆಂಬರ್ ನವದೆಹಲಿ:ಕೆಎಸ್ಆರ್ಟಿಸಿಯ Vehicle Tracking and Monitoring - Passenger Information System ಉಪಕ್ರಮಕ್ಕೆ Business World Smart Cities ರಾಷ್ಟ್ರೀಯ ಪ್ರಶಸ್ತಿ - 2017 Accessibility & Mobility ವರ್ಗದಲ್ಲಿ ಲಭಿಸಿರುತ್ತದೆ.
ದರ್ಜೆ-2 ಅಧಿಕಾರಿ ಹುದ್ದೆಗಳಿಗೆ ಆನ್-ಲೈನ್ CAT ಪರೀಕ್ಷೆಯನ್ನು ನಡೆಸುತ್ತಿರುವ ಬಗ್ಗೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಜಾಹೀರಾತು ಸಂ.1/2017 & 2/2017 ದಿನಾಂಕ 04.01.2017 ರಂದು ಅಧಿಸೂಚಿಸಿರುವ ದರ್ಜೆ-2 ಅಧಿಕಾರಿ ಹುದ್ದೆಗಳಿಗೆ ದಿನಾಂಕ 24.12.2017
ಕೆಎಸ್ಆರ್ಟಿಸಿ ಚಾಲಕನಿಗೆ ಚಿನ್ನದ ಪದಕ
ಶ್ರೀ. ಚಿನ್ನಸ್ವಾಮಿ, ಚಾಲಕ ಬಿ.ಸಂ. 1536, ಗುಂಡ್ಲುಪೇಟೆ ಘಟಕ, ಚಾಮರಾಜನಗರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ:08-10-2017 ರಂದು ವಾಹನ ಸಂಖ್ಯೆ: ಕೆಎ-10-ಎಫ್-0067 ರಲ್ಲಿ ಗುಂಡ್ಲುಪೇಟೆ .
ಬಿಪಿಸಿಎಲ್ಡೀ ಸೆಲ್ ಪೂರೈಸುವ ಟ್ರಕ್ ಮಾಲಿಕನ ವಿರುದ್ದ KSRTC ಯಿಂದ ಪೊಲೀಸ್ ಪ್ರಕರಣ ದಾಖಲು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ಘಟಕಗಳಿಗೆ ಮೆ.ಭಾರತ್ ಪೆಟ್ರೋಲಿಯಂ ಕಂಪನಿ ಲಿಮಿಟೆಡ್ನಿಂದ ಇಂಧನ ಸರಬರಾಜು ಮಾಡುತ್ತಿದ್ದು, ದಿನಾಂಕ 30-11-2017 ರಂದು ಚಿಕ್ಕಮಗಳೂರು ವಿಭಾಗದ ಸಕಲೇಶಪುರ ಘಟಕಕ್ಕೆ ಇಂಧನ ಸರಬರಾಜು ಮಾಡಲು ಬರುವಂತಹ ಡೀಸೆಲ್ ಟ್ಯಾಂಕರ್.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಕಾರ್ಯಾಚರಣೆಯಾಗುತ್ತಿರುವ ಫ್ಲೈ ಬಸ್ ಸಾರಿಗೆಗಳ ಪ್ರಯಾಣದರದ ಬಗ್ಗೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಸಾರಿಗೆಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು, ಖಾಸಗಿ ಪ್ರವರ್ತಕರಾದ ಓಲಾ ಮತ್ತು ಉಬರ್ ಕಂಪನಿಗಳು ಸ್ಪರ್ಧಾತ್ಮಕ ದರಗಳಲ್ಲಿ ಸಾರಿಗೆ ಸೇವೆ ಒದಗಿಸುತ್ತಿದ್ದು
ಕೆಎಸ್ಆರ್ಟಿಸಿಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಪ್ರಶಸ್ತಿ-2017
ದಿನಾಂಕ 7ನೇ ಡಿಸೆಂಬರ್ 2017: ರಾಜಭವನ ಬೆಂಗಳೂರು: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತೀ ಹೆಚ್ಚು .
ದರ್ಜೆ-2 ಅಧಿಕಾರಿ ಹುದ್ದೆಗಳಿಗೆ ಆನ್-ಲೈನ್ CAT ಪರೀಕ್ಷೆಯನ್ನು ನಡೆಸುತ್ತಿರುವ ಬಗ್ಗೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಉಲ್ಲೇಖಗಳ ಜಾಹೀರಾತಿನ ಅನುಸಾರ ಕರೆದಿರುವ ಅಧಿಕಾರಿ ದರ್ಜೆ-2 ಹುದ್ದೆಗಳಿಗೆ ದಿನಾಂಕ 24.12.2017 ರಂದು ಆನ್-ಲೈನ್ ಸಾಮಾನ್ಯ ಸಾಮಥ್ರ್ಯ ಪರೀಕ್ಷೆ (ಅಂಖಿ) ಯನ್ನು ನಡೆಸಲು ತೀರ್ಮಾನಿಸಲಾಗಿದ್ದು ಅದರಂತೆ ಕರೆಪತ್ರವನ್ನು ದಿ.09/12/2017
2017-18 ನೇ ಸಾಲಿನ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತ ಭಾರಿ ವಾಹನ ಚಾಲನಾ ಮತ್ತು ತಾಂತ್ರಿಕ ತರಬೇತಿ
2017-18ನೇ ಸಾಲಿನ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಭಾರಿ ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿಯನ್ನು ಉಚಿತವಾಗಿ ನೀಡಲು ಈ ಕೆಳಕಂಡ ದಾಖಲೆಗಳು ಮತ್ತು ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಪ್ರಾಂಶುಪಾಲರು
ಮೇಲ್ವಿಚಾರಕ, ದರ್ಜೆ-3 ಆಂತರಿಕ ಹಾಗೂ ನೇರ ಹುದ್ದೆಗಳ ಸಂಭವನೀಯ ಆಯ್ಕೆ ಪಟ್ಟಿ ಪ್ರಕಟಿಸಿರುವ ಬಗ್ಗೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಉಲ್ಲೇಖಿತ ಜಾಹೀರಾತಿಗಳ ಅನುಸಾರ ದರ್ಜೆ-3, ಮೇಲ್ವಿಚಾರಕ ಆಂತರಿಕ ಹಾಗೂ ನೇರ ನೇಮಕಾತಿ ಹುದ್ದೆಗಳಲ್ಲಿ ಸಿಬ್ಬಂದಿ ಮೇಲ್ವಿಚಾರಕ, ಉಗ್ರಾಣ ರಕ್ಷಕ ಮತ್ತು ಅಂಕಿಅಂಶ ಮೇಲ್ವಿಚಾರಕ ಹುದ್ದೆಗಳ ಸಂಭವನೀಯ ಆಯ್ಕೆ ಪಟ್ಟಿಯನ್ನು ದಿನಾಂಕ 30.11.2017 ರಂದು ಸಂಸ್ಥೆಯ.
ಬೆಂಗಳೂರು-ಪಂಪಾ ಮಾರ್ಗದಲ್ಲಿ ರಾಜಹಂಸ ವಾಹನವÀನ್ನು ದಿನಾಂಕ 01/12/2017 ರಿಂದ ಕಾರ್ಯಾಚರಣೆ ಮಾಡುವ ಬಗ್ಗೆ
ಅಪಘಾತ ಪರಿಹಾರ ನಿಧಿಯ “ಬಸ್ ಮಿತ್ರ” ನೂತನ ವಾಹನಗಳ (45 ಬೊಲೇರೊ ವಾಹನಗಳ) ಉದ್ಘಾಟನಾ ಸಮಾರಂಭ
ಕೆಎಸ್ಆರ್ಟಿಸಿಯ ಅಪಘಾತ ಪರಿಹಾರ ನಿಧಿಯ “ಬಸ್ ಮಿತ್ರ” ನೂತನ ವಾಹನಗಳ (45 ಬೊಲೇರೊ ಜೀಪುಗಳ) ಉದ್ಘಾಟನಾ ಸಮಾರಂಭವನ್ನು ಶ್ರೀ.ಹೆಚ್.ಎಂ.ರೇವಣ್ಣ, ಮಾನ್ಯ ಸಾರಿಗೆ ಸಚಿವರು.
ಅಪಘಾತ ಪರಿಹಾರ ನಿಧಿಯ “ಬಸ್ ಮಿತ್ರ” ನೂತನ ವಾಹನಗಳ ಉದ್ಘಾಟನಾ ಸಮಾರಂಭವನ್ನು ಬೆಂಗಳೂರು ಕೇಂದ್ರೀಯ ವಿಭಾಗದ, 4ನೇ ಘಟಕದ (ಕೇಂದ್ರ ಕಛೇರಿ ಹಿಂಭಾಗ) ಹಮ್ಮಿಕೊಳ್ಳಲಾಗಿದೆ.
ದಿನಾಂಕ 03.11.2017ರಂದು ಬೆಳಗ್ಗೆ 10.00 ಗಂಟೆಗೆ ಕರಾರಸಾ,ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ, 4ನೇ ಘಟಕದ (ಕೇಂದ್ರ ಕಛೇರಿ ಹಿಂಭಾಗ) ಆವರಣದಲ್ಲಿ ಅಪಘಾತ ಪರಿಹಾರ ನಿಧಿಯ “ಬಸ್ ಮಿತ್ರ” ನೂತನ ವಾಹನಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯಲ್ಲಿ 62ನೇ ಕನ್ನಡ ರಾಜ್ಯೋತ್ಸವ
ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯಲ್ಲಿ 62ನೇ ಕನ್ನಡ ರಾಜ್ಯೋತ್ಸವವನ್ನು, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಸ್.ಆರ್.ಉಮಾಶಂಕರ್ ಭಾಆಸೇ., ರವರು ನಾಡದೇವಿ ಭುವನೇಶ್ವರಿಗೆ ಪುಷ್ಪಾರ್ಷನೆ ಮಾಡುವ ಮೂಲಕ ನೆರವೇರಿಸಿದರು. .
ಮಾನ್ಯ ಸಾರಿಗೆ ಸಚಿವರ ಪತ್ರಿಕಾಗೋಷ್ಠಿ
ದಿನಾಂಕ 23.10.2017 ರಂದು ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯಲ್ಲಿ ಮಾನ್ಯ ಸಾರಿಗೆ ಸಚಿವರಾದ ಶ್ರೀ ಹೆಚ್.ಎಂ. ರೇವಣ್ಣರವರು ಕೆಎಸ್ಆರ್ಟಿಸಿಯ ಎಲ್ಲಾ 14 ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರುಗಳ ಉಪಸ್ಥಿತಿಯೊಂದಿಗೆ ನಿಗಮದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ.
ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ, ನಾಲ್ಕು ನಿಗಮಗಳಿಂದ ಚಾಲಕ/ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಹಾಗೂ ಇನ್ನಿತರೆ ಆಡಳಿತ ಸಿಬ್ಬಂದಿಗಳಿಂದ ಒಟ್ಟು 18,978 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 14,418 ಅರ್ಜಿಗಳು ಊರ್ಜಿತವಾಗಿವೆ..
IRU ಅಂತರರಾಷ್ಟ್ರೀಯ ರಸ್ತೆ ಸಾರಿಗೆ ಯೂನಿಯನ್ ಬಸ್ ಎಕ್ಸೆಲೆನ್ಸ್ ಪ್ರಶಸಿ (International Bus Transport Union Bus Excellence Award ) 2017 ಮತ್ತು ಇದು ಕೆಎಸ್ಆರ್ಟಿಸಿಗೆ ಲಭಿಸುತ್ತಿರು 210 ನೇ ಪ್ರಶಸ್ತಿಯಾಗಿದೆ
ಕರಾರಸಾರಿಗೆ ಸಂಸ್ಥೆಯು ಮೊಟ್ಟ ಮೊದಲ ಬಾರಿಗೆ ಅಂತರರಾಷ್ಟ್ರೀಯ ಸಾರಿಗೆ ಯೂನಿಯನ್ ಬಸ್ ಎಕ್ಸಲೆನ್ಸ್ ಪ್ರಶಸ್ತಿ 2017ರ ರನ್ನರ್ ಅಫ್ ಸ್ಥಾನವನ್ನು ಪಡೆದಿದೆ.
ನೂತನ ಐರಾವತ ಡೈಮಂಡ್ ಕ್ಲಾಸ್ ಅಂತರರಾಜ್ಯ ಬಸ್ಸು ಮಾರ್ಗಗಳ ಉದ್ಘಾಟನಾ ಸಮಾರಂಭ
ಕೆಎಸ್ಆರ್ಟಿಸಿಯ ನೂತನ ಐರಾವತ ಡೈಮಂಡ್ ಕ್ಲಾಸ್ ಅಂತರರಾಜ್ಯ ಬಸ್ಸು ಮಾರ್ಗಗಳ ಉದ್ಘಾಟನಾ ಸಮಾರಂಭವನ್ನು ಶ್ರೀ.ಹೆಚ್.ಎಂ.ರೇವಣ್ಣ, ಮಾನ್ಯ ಸಾರಿಗೆ ಸಚಿವರು.
ನೂತನ ಐರಾವತ ಡೈಮಂಡ್ ಕ್ಲಾಸ್ ಅಂತರರಾಜ್ಯ ಬಸ್ಸು ಮಾರ್ಗಗಳ ಉದ್ಘಾಟನಾ ಸಮಾರಂಭವನ್ನು ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 14.10.2017ರಂದು ಬೆಳಗ್ಗೆ 9.00 ಗಂಟೆಗೆ ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯ ಮುಂಭಾಗದಲ್ಲಿ ನೂತನ ಐರಾವತ ಡೈಮಂಡ್ ಕ್ಲಾಸ್ ಅಂತರರಾಜ್ಯ ಬಸ್ಸು ಮಾರ್ಗಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆತಿ
ದೀಪಾವಳಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 17.10.2017 ರಿಂದ 19.10.2017 ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 1300 ರಿಂದ 1500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಕೆಎಸ್ಆರ್ಟಿಸಿಗೆ ರಾಷ್ಟ್ರೀಯ Greentech HR Gold Award-2017 ಪ್ರಶಸ್ತಿ
ಕೆಎಸ್ಆರ್ಟಿಸಿಯ Staff Duty Rota System ಉಪಕ್ರಮಕ್ಕೆ ಪ್ರತಿಷ್ಠಿತ Greentech HR ಪ್ರಶಸ್ತಿಯು ಸ್ವರ್ಣ ವಿಭಾಗದಲ್ಲಿ ಲಭಿಸಿರುತ್ತದೆ
ಬೆಂಗಳೂರು-ಶ್ರೀಹರಿಕೋಟಾ ಮಾರ್ಗದಲ್ಲಿ ಐರಾವತ ಡೈಮಂಡ್ ಕ್ಲಾಸ್ ವಾಹನಗಳ ಕಾರ್ಯಾಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 08/10/2017 ರಿಂದ ಬೆಂಗಳೂರು-ಶ್ರೀಹರಿಕೋಟಾ ಮಾರ್ಗದಲ್ಲಿ (ಹಗಲು ಮತ್ತು ರಾತ್ರಿ ಸಾರಿಗೆಗಳು) ಐರಾವತ ಡೈಮಂಡ್ ಕ್ಲಾಸ್ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಮೈಸೂರು ದಸರಾ-2017 ರ ಉತ್ಸವಕ್ಕೆ ಕರಾರಸಾ ನಿಗಮದಿಂದ 1500 ವಿಶೇಷ ಸಾರಿಗೆ ವ್ಯವಸ್ಥೆ
ಮೈಸೂರಿನಲ್ಲಿ ನಡೆಯುವ ದಸರಾ-2017 ನೇ ಸಾಲಿನ ದಸರಾ ಮಹೋತ್ಸವದ ಅಂಗವಾಗಿ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ದರ್ಜೆ
3 ಮೇಲ್ವಿಚಾರಕ ಹುದ್ದೆಗಳ ನೇರ ನೇಮಕಾತಿಗಾಗಿ ಮೆರಿಟ್ ಪಟ್ಟಿ ಹಾಗೂ ಕರೆಪತ್ರಗಳನ್ನು ಮುದ್ರಿಸಿಕೊಳ್ಳುವ ಕುರಿತು.
ಕೆಎಸ್ಆರ್ಟಿಸಿವತಿಯಿಂದ ಪ್ಯಾಕೇಜ್ ಟೂರ್ಸ್
ಕೆಎಸ್ಆರ್ಟಿಸಿವತಿಯಿಂದ ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಜ್ ಟೂರ್ಸ್ 22 ನೇ ಸೆಪ್ಟ್ಟೆಂಬರ್ 2017 ರಿಂದ ಅಕ್ಟೋಬರ್ 2 ರವರೆಗೆ ಕಾರ್ಯಾಚರಣೆಯಾಗಲಿದೆ.
ಬೆಂಗಳೂರು-ಆಲೆಪ್ಪಿ ಮಾರ್ಗದಲ್ಲಿ ಮಲ್ಟಿಆಕ್ಸಲ್ ವಾಹನ ದಿನಾಂಕ 09/10/2017 ರಿಂದ ಕಾರ್ಯಾಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 09/10/2017 ರಿಂದ ಹೊಸದಾಗಿ ಬೆಂಗಳೂರು-ಆಲೆಪ್ಪಿ ಮಾರ್ಗದಲ್ಲಿ ಮಲ್ಟಿಆಕ್ಸಲ್ ವಾಹನವನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಹಾಗೂ ಅಧಿಕಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ನೂತನ ಐರಾವತ ಕ್ಲ್ಲಬ್ ಕ್ಲಾಸ್ನ 23 ಬಸ್ಸುಗಳ ಉದ್ಘಾಟನೆ ಹಾಗೂ ಸಾರಿಗೆ ಇಲಾಖೆಯ ಕಳೆದ 4 ವರ್ಷಗಳ ಸಾಧನೆಯ ಕೈಪಿಡಿ ಬಿಡುಗಡೆ ಸಮಾರಂಭ
ಕೆಎಸ್ಆರ್ಟಿಸಿಯ ನೂತನ ಐರಾವತ ಕ್ಲಬ್ ಕ್ಲಾಸ್ನ 23 ಬಸ್ಸುಗಳ ಉದ್ಘಾಟನೆ ಹಾಗೂ ಸಾರಿಗೆ ಇಲಾಖೆಯ ಕಳೆದ 4 ವರ್ಷಗಳ ಸಾಧನೆಯ ಕೈಪಿಡಿ ಬಿಡುಗಡೆ ಸಮಾರಂಭವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಸಿದ್ಧರಾಮಯ್ಯರವರು,ದಿನಾಂಕ: 13-09-2017 ರಂದು ಬೆಳಗ್ಗೆ 10.00 ಗಂಟೆಗೆ ಬೆಂಗಳೂರಿನ ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ಸ್ (ಹೈಕೋರ್ಟ್ ಮುಂಭಾಗ) ದಲ್ಲಿ ನೆರವೇರಿಸಿದರು.
ಮಾನ್ಯ ಸಾರಿಗೆ ಸಚಿವರ ಪತ್ರಿಕಾಗೋಷ್ಠಿ
ದಿನಾಂಕ: 14-09-2017 ರಂದು ಅಪರಾಹ್ನ 12.00 ಗಂಟೆಗೆ (Luncheon meet) ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯಲ್ಲಿ ಶ್ರೀ ಹೆಚ್.ಎಂ.ರೇವಣ್ಣ, ಮಾನ್ಯ ಸಾರಿಗೆ ಸಚಿವರು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದಾರೆ
ತಿರು ಓಣಂ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ತಿರು ಓಣಂ ಹಬ್ಬದ ಪ್ರಯುಕ್ತ ಕರಾರಸಾ ನಿಗಮದ ವತಿಯಿಂದ, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ: 31.08.2017 ರಿಂದ 10.09.2017 ರವರೆಗೆ ಈ ಕೆಳಕಂಡ ಸ್ಥಳಗಳಿಗೆ ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಟಿಕೇಟ್ ಇಲ್ಲದೆ ಪ್ರಯಾಣಿಸಿದ 6210 ಪ್ರಯಾಣಿಕರಿಗೆ ದಂಡ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳನ್ನು ತನಿಖೆಗೊಳಪಡಿಸಿ ಟಿಕೇಟ್ ರಹಿತ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿರುತ್ತಾರೆ..
ಬೆಂಗಳೂರು-ಕೆಮ್ಮಣ್ಣುಗುಂಡಿ ಮಾರ್ಗದಲ್ಲಿ ವೇಗದೂತ ವಾಹನದ ದಿನಾಂಕ 28/08/2017 ರಿಂದ ಕಾರ್ಯಾಚರಣೆಥೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 28/08/2017 ರಿಂದ ಹೊಸದಾಗಿ ಬೆಂಗಳೂರು-ಕೆಮ್ಮಣ್ಣುಗುಂಡಿ ಮಾರ್ಗದಲ್ಲಿ ವೇಗದೂತ ವಾಹನ ಕಾರ್ಯಾಚರಣೆ ಮಾಡಲಾಗುತ್ತಿದೆ.
ಗಣೇಶೋತ್ಸವ ಸಮಾರಂಭ
ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯಲ್ಲಿ ಗಣೇಶೋತ್ಸವ ಸಮಾರಂಭ ಮತ್ತು ಪೂಜಾ ಕಾರ್ಯಕ್ರಮ
ಅಂತರ ನಿಗಮ ವರ್ಗಾವಣೆಗೆ ಸಂಬಂಧಿಸಿದಂತೆ
ಅಂತರ್ನಿಗಮ ವರ್ಗಾವಣೆ ಪಟ್ಟಿಯನ್ನು ನಿಗಮದ www.transfer.www.www.ksrtc.in ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದೆ. ಸದರಿ ಪಟ್ಟಿಗೆ ಸಂಬಂಧಿಸಿದಂತೆ, ದಿನಾಂಕ:31.8.2017ರವರೆಗೆ ಆಕ್ಷೇಪಣೆಯನ್ನು ಕೆಎಸ್ಆರ್ಟಿಸಿ ಕೇಂದ್ರ ಕಛೇರಿಯ ಆಡಳಿತ ಶಾಖೆಯಲ್ಲಿ ಸಲ್ಲಿಸಬಹುದಾಗಿರುತ್ತದೆ.
ಗೌರಿ/ಗಣೇಶ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ಕರಾರಸಾ ನಿಗಮದ ವತಿಯಿಂದ ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಅನುಸೂಚಿತ ಸಾರಿಗೆಗಳ ಜೊತೆಗೆ ಗೌರಿ/ಗಣೇಶ ಹಬ್ಬದ ಪ್ರಯುಕ್ತ ದಿನಾಂಕ 23/08/2017 ರಿಂದ 26/08/2017ರಂದು ಉಂಟಾಗುವ ಸಂಚಾರ ಒತ್ತಡಕ್ಕನುಗುಣವಾಗಿ 800 ರಿಂದ 1000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಕೆಎಸ್ಆರ್ಟಿಸಿ- ಆನ್ಲೈನ್ ಸಾಮಾನ್ಯ ಸಾಮಥ್ರ್ಯ ಪರೀಕ್ಷೆ (CAT): ಒಟ್ಟು 4837 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು
ಕೆಎಸ್ಆರ್ಟಿಸಿಯು ಆಹ್ವಾನಿಸಿದ್ದ ಜಾಹೀರಾತು ಸಂಖ್ಯೆ 3 ಮತ್ತು 4 ರಲ್ಲಿನ 83 ಮೇಲ್ವಿಚಾರಕ ಹುದ್ದೆಗಳಿಗೆ ಆನ್ಲೈನ್ ಸಾಮಾನ್ಯ ಸಾಮಥ್ರ್ಯ ಪರೀಕ್ಷೆ (ಅಂಖಿ)ಯನ್ನು ದಿನಾಂಕ:19/08/2017ರಂದು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಒಟ್ಟು 4837 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು
ಶ್ರೀ. ಬಿ.ಎನ್.ಎಸ್. ರೆಡ್ಡಿ, ಭಾಪೋಸೇ, ಐಜಿಪಿ ಮತ್ತು ನಿರ್ದೇಶಕರು (ಭ&ಜಾ) ಕೆಎಸ್ಆರ್ಟಿಸಿ ರವರಿಗೆ ಟೆನ್ನಿಸ್ ಸಿಂಗಲ್ಸ್ನಲ್ಲಿ ಚಿನ್ನದ ಪದಕ
ಶ್ರೀ. ಬಿ.ಎನ್.ಎಸ್. ರೆಡ್ಡಿ, ಭಾಪೋಸೇ, ಐಜಿಪಿ ಮತ್ತು ನಿರ್ದೇಶಕರು (ಭ&ಜಾ) ಕೆಎಸ್ಆರ್ಟಿಸಿ ರವರು ಅಮೇರಿಕಾದ ಲಾಸ್ ಏಜೆಂಲೀಸ್ನಲ್ಲಿ ವಿಶ್ವ ಪೋಲೀಸ್ ಮತ್ತು ಫೈರ್ ಕ್ರೀಡಾಕೂಟ-2017ರ ಟೆನ್ನಿಸ್ ಸಿಂಗಲ್ಸ್ನಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿರುತ್ತಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ
71ನೇ ಸ್ವಾತಂತ್ರೋತ್ಸವವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಆರ್ ಉಮಾಶಂಕರ್, ಭಾ.ಆ.ಸೇ ರವರು ಧ್ವಜಾರೋಹಣ ನೆರವೇರಿಸಿದರು.
ಕೆಎಸ್ಆರ್ಟಿಸಿಗೆ ರಾಷ್ಟ್ರೀಯ ಸಾರಿಗೆ ಶ್ರೇಷ್ಠತಾ ಪ್ರಶಸ್ತಿ-2017
ದಿನಾಂಕ:12ನೇ ಆಗಸ್ಟ್– 2017 ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ “ವೆಹಿಕಲ್ ಟ್ರ್ಯಾಕಿಂಗ್ &ಮಾನಿಟರಿಂಗ್ ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆ” (ವಿಟಿಎಂಎಸ್ - ಪಿಐಎಸ್) ಯೋಜನೆಯ ಸಫಲ ಅನುಷ್ಠಾನಕ್ಕಾಗಿ Safety, Punctuality and Regularity in operations ವರ್ಗದಲ್ಲಿ ರಾಷ್ಟ್ರೀಯ ಸಾರಿಗೆ ಶ್ರೇಷ್ಠತಾ ಪ್ರಶಸ್ತಿ ದೊರಕಿದೆ.
ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾರ್ವತ್ರಿಕ ರಜೆಗಳ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾರ್ವತ್ರಿಕ ರಜೆಗಳ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 11.08.2017 ರಿಂದ 12.08.2017ರವರೆಗೆ ಬೆಂಗಳೂರಿನಿಂದ 450 ರಿಂದ 500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಮಾನ್ಯ ಉಚ್ಛ ನ್ಯಾಯಾಲಯವು ಮೆಸರ್ಸ್ ಟಾಟಾ ಮೋಟಾರ್ಸ್ರವರ ರಿಟ್ ಅರ್ಜಿಯನ್ನು ವಜಾಗೊಳಿಸಿದೆ
ಮಾನ್ಯ ಉಚ್ಛ ನ್ಯಾಯಾಲಯವು ಮೆಸರ್ಸ್ ಟಾಟಾ ಮೋಟಾರ್ಸ್ರವರು ದಾಖಲಿಸಿರುವ ಪ್ರಕರಣವನ್ನು ಹಿಂಪಡೆದಿರುವುದರಿಂದ, ಯಾವುದೇ ಸ್ವಾತಂತ್ರ್ಯವನ್ನು ಕಾಯ್ದಿರಿಸದೇ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಟಿಕೇಟ್ ಇಲ್ಲದೆ ಪ್ರಯಾಣಿಸಿದ 6909 ಪ್ರಯಾಣಿಕರಿಗೆ ದಂಡ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳನ್ನು ತನಿಖೆಗೊಳಪಡಿಸಿ ಟಿಕೇಟ್ ರಹಿತ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿರುತ್ತಾರೆ.
ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ 6ನೇ ಪೂರಕ ಅಂತರರಾಜ್ಯ ಸಾರಿಗೆ ಒಪ್ಪಂದದ ಬಗ್ಗೆ
ಕರ್ನಾಟಕ ಹಾಗೂ ಕೇರಳ ರಾಜ್ಯಗಳ ನಡುವೆ ಇದುವರೆಗೆ ಒಂದು ಪ್ರಧಾನ ಅಂತರರಾಜ್ಯ ಸಾರಿಗೆ ಒಪ್ಪಂದ ಹಾಗೂ 5 ಪೂರಕ ಅಂತರರಾಜ್ಯ ಸಾರಿಗೆ ಒಪ್ಪಂದಗಳು ಏರ್ಪಟ್ಟಿರುತ್ತವೆ
ಕೆಎಸ್ಆರ್ಟಿಸಿ ಗೆ 200ನೇ ಪ್ರಶಸ್ತಿ - “Project Management Institute Of India ಪ್ರಶಸ್ತಿ-2017”
ಬೆಂಗಳೂರು, 21ನೇ ಜುಲೈ2017: ಕೆಎಸ್ಆರ್ಟಿಸಿಯ MITRA – Mysore Intelligent Transport System ದೇಶದ ಪ್ರಪ್ರಥಮ ಜಾಣ ಸಾರಿಗೆ ವ್ಯವಸ್ಥೆ ಉಪಕ್ರಮಕ್ಕೆ ಪ್ರತಿಷ್ಠಿತ Project Management Institute Of India Award 2017 ಪ್ರಶಸ್ತಿಯು ಲಭಿಸಿರುತ್ತದೆ.
ಕೆಎಸ್ಆರ್ಟಿಸಿಗೆ ‘ National India Bus Awards- 2017’ ಎರಡು ರಾಷ್ಟ್ರೀಯ ಪ್ರಶಸ್ತಿಗಳು
ಕೆಎಸ್ಆರ್ಟಿಸಿಯ Intelligent Transport System (ಜಾಣ ಸಾರಿಗೆ ವ್ಯವಸ್ಥೆ) ಮತ್ತು ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಪರಿಸರಸ್ನೇಹಿ ಉಪಕ್ರಮಗಳಿಗೆ ಪ್ರತಿಷ್ಠಿತ National India Bus Awards-2017 ಎರಡು ಪ್ರಶಸ್ತಿಗಳು ಲಭಿಸಿರುತ್ತವೆ.
ಕ ರಾ ರ ಸಾ ನಿಗಮದಿಂದ ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಕರೋನ ಎಸಿ ಸ್ಲೀಪರ್ ವಾಹನ ಕಾರ್ಯಾಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಕರೋನ ಎಸಿ ಸ್ಲೀಪರ್ ವಾಹನವನ್ನು ಕಾರ್ಯಾಚರಣೆ ಮಾಡಲಾಗುವುದು.
ಕ.ರಾ.ರ.ಸಾ.ನಿಗಮದಿಂದ 2017-18 ನೇ ಸಾಲಿಗಾಗಿ ವಿದ್ಯಾರ್ಥಿ ಬಸ್ಪಾಸ್ಗಳ ವಿತರಣೆ
ಕ.ರಾ.ರ.ಸಾ. ನಿಗಮವು 2017-18 ನೇ ಸಾಲಿಗಾಗಿ ಪ್ರಾಥಮಿಕ ಹಾಗೂ ಪಿ.ಯು ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲು ಕ.ರಾ.ರ.ಸಾ.ನಿಗಮವು ಕ್ರಮ ಕೈಗೊಂಡಿರುತ್ತದೆ.
ಟಿಕೇಟ್ ಇಲ್ಲದೆ ಪ್ರಯಾಣಿಸಿದ 7187 ಪ್ರಯಾಣಿಕರಿಗೆ ದಂಡ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳನ್ನು ತನಿಖೆಗೊಳಪಡಿಸಿ ಟಿಕೇಟ್ ರಹಿತ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿರುತ್ತಾರೆ.
ರಂಜಾನ್ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ರಂಜಾನ್ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 23.06.2017 ರಿಂದ 24.06.2017ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 450 ರಿಂದ 500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಚಾಲಕನ ಅಮಾನತು
ಪುತ್ತೂರು ವಿಭಾಗದ ಮಡಿಕೇರಿ ಘಟಕದ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಕರ್ತವ್ಯ ನಿರತ ಚಾಲಕರಾದ ಶ್ರೀ. ಡಿ.ಪಿ.ಪುನೀತ್, ಚಾಲಕ-ಕಂ-ನಿರ್ವಾಹಕ, ಬಿ.ಸಂ 429 ರವರನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿದೆ.
ಕೆಎಸ್ಆರ್ಟಿಸಿ ತಿರುಪತಿ-ತಿರುಮಲ ಪ್ಯಾಕೇಜ್ ಟೂರ್ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತೊಂದು ಬಸ್ಸನ್ನು ದಿನಾಂಕ: 15/06/2017 ರಿಂದ ಕಾರ್ಯಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ನ್ನು 12ಮೇ 2017 ರಿಂದ ಒಂದು ಬಸ್ಸಿನೊಂದಿಗೆ ಪ್ರಾರಂಭಿಸಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತೊಂದು ಬಸ್ಸನ್ನು ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ಗೆ ಸೇರ್ಪಡೆ ಮಾಡಲಾಗುತ್ತಿದೆ
ಕ.ರಾ.ರ.ಸಾ.ನಿಗಮದಿಂದ 2017-18 ನೇ ಸಾಲಿಗಾಗಿ ವಿದ್ಯಾರ್ಥಿ ರಿಯಾಯಿತಿ ಬಸ್ಪಾಸ್ಗಳನ್ನು ವಿತರಣೆ
ಕರ್ನಾಟಕ ಸರ್ಕಾರದ ಆದೇಶದಂತೆ, 2017-18 ನೇ ಸಾಲಿನಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಕ.ರಾ.ರ.ಸಾ.ನಿಗಮವು ಕ್ರಮ ಕೈಗೊಂಡಿರುತ್ತದೆ.
ಬೆಂಗಳೂರು-ಮುರುಡೇಶ್ವರ ಮಾರ್ಗದಲ್ಲಿ ಹೊಸದಾಗಿ ನಾನ್ ಎಸಿ ಸ್ಲೀಪರ್ ವಾಹನ ಕಾರ್ಯಾಚರಣೆ
ರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 12/6/2017 ರಿಂದ ಹೊಸದಾಗಿ ಬೆಂಗಳೂರು- ಮುರುಡೇಶ್ವರ ಮಾರ್ಗದಲ್ಲಿ ಹಾಸನ, ಮಂಗಳೂರು, ಕುಂದಾಪುರ, ಬೈಂದೂರು, ಶಿರೂರು ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ವಾಹನವನ್ನು ಕಾರ್ಯಾಚರಣೆ ಮಾಡಲಾಗುವುದು
ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಿಂದ ದಿನಾಂಕ:05-06-2017 ರಂದು ವಿಶ್ವ ಪರಿಸರ ದಿನಾಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದಿನಾಂಕ:05-06-2017 ರಂದು ಬೆಳಿಗ್ಗೆ 09.00 ಗಂಟೆಗೆ ಕರಾರಸಾ,ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ, 4ನೇ ಘಟಕದ (ಕೇಂದ್ರ ಕಛೇರಿ ಹಿಂಭಾಗ) ಆವರಣದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಕ.ರಾ.ರ.ಸಾ.ನಿಗಮದಿಂದ ವಿಶ್ವ ತಂಬಾಕು ಮುಕ್ತ ದಿನಾಚರಣೆ
ಕ.ರಾ.ರ.ಸಾ.ನಿಗಮವು ದಿನಾಂಕ:31.05.2017 ರಂದು ವಿಶ್ವ ತಂಬಾಕು ಮುಕ್ತ ದಿನಾಚರಣೆಯ ನಿಮಿತ್ತ "ತಂಬಾಕು - ಅಭಿವೃದ್ಧಿಗೆ ಮಾರಕ’’ ಕಾರ್ಯಕ್ರಮ ಆಯೋಜಿಸಿತ್ತು.
ಕೆಎಸ್ಆರ್ಟಿಸಿ ತಿರುಪತಿ-ತಿರುಮಲಕ್ಕೆ ಪ್ಯಾಕೇಜ್ ಟೂರನ್ನು ತಿರುಚನೂರಿನ ಶ್ರೀ ಪದ್ಮಾವತಿದೇವಿ ದೇವಸ್ಥಾನ ದರ್ಶನವನ್ನು ಒಳಗೊಂಡಂತೆ ವಿಸ್ತರಿಸಲಾಗಿದೆ
ಕರಾರಸಾ ನಿಗಮವು ಬೆಂಗಳೂರಿನಿಂದ ತಿರುಪತಿ-ತಿರುಮಲಕ್ಕೆ ಪ್ಯಾಕೇಜ್ ಟೂರನ್ನು ಪ್ರಾರಂಭಿಸಿದೆ. ಪ್ರಯಾಣಿಕರ ಸಲಹೆಯಂತೆ, ತಿರುಪತಿ-ತಿರುಮಲ ಪ್ಯಾಕೇಜ್ ಟೂರನ್ನು ತಿರುಚನೂರಿನ ಶ್ರೀ ಪದ್ಮಾವತಿದೇವಿ ದೇವಸ್ಥಾನ ದರ್ಶನವನ್ನು ಒಳಗೊಂಡಂತೆ ವಿಸ್ತರಿಸಲಾಗಿದೆ
ಉಚಿತ ನೂತನ ಸೇವೆಗಳಿಗೆ ಚಾಲನೆ - ಪ್ರಯಾಣಿಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿಯ ಮತ್ತೊಂದು ಮಹತ್ವದ ಹೆಜ್ಜೆ
ಕೆಎಸ್ಆರ್ಟಿಸಿಯು ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಕುಡಿಯುವ ನೀರಿನ ಬಾಟೆಲ್ಗಳ ವ್ಯವಸ್ಥೆ, ದಿನಪತ್ರಿಕೆಗಳು ಹಾಗೂ ಫಾಸ್ಟ್ ಟ್ಯಾಗ್ ವ್ಯವಸ್ಥೆಗಳನ್ನು ಜಾರಿಗೆ ತರುತ್ತಿದೆ. ಈ ಎಲ್ಲಾ ಸೇವೆಗಳನ್ನು ಸಂಸ್ಥೆಯು ಪ್ರಯಾಣಿಕರಿಗೆ ಉಚಿತವಾಗಿ ನೀಡುತ್ತಿದೆ
ಪ್ರಪ್ರಥಮ ಬಾರಿಗೆ ಕೆಎಸ್ಆರ್ಟಿಸಿ ವತಿಯಿಂದ ತಿರುಪತಿ -ತಿರುಮಲಗೆ ಪ್ಯಾಕೇಜ್ ಟೂರ್ ಪ್ರಾರಂಭ
ದಿನಾಂಕ: 05 ಮೇ 2017, ಕರಾರಸಾನಿಗಮ ಕೇಂದ್ರ ಕಛೇರಿ, ಬೆಂಗಳೂರು: ಕÀರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಆಂಧ್ರ ಪ್ರದೇಶ ಪ್ರವಾಸೋದ್ಯಮಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿ ಜಂಟಿಯಾಗಿ ಬೆಂಗಳೂರಿನಿಂದ ತಿರುಮಲಕ್ಕೆ ಪ್ಯಾಕೇಜ್ ಪ್ರವಾಸ ಪ್ರಾರಂಭಿಸಲು ಶ್ರೀ.ಎಸ್.ಆರ್ ಉಮಾಶಂಕರ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ಟಿಸಿ ಮತ್ತು ಶ್ರೀ. ಹಿಮಾಂಶು ಶುಕ್ಲ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ಒಪ್ಪಂದ ಮಾಡಿಕೊಳ್ಳಲಾಯಿತು
ಕ ರಾ ರ ಸಾ ನಿಗಮದಿಂದ ಹೊಸದಾಗಿ ಸಾರಿಗೆಗಳ ಕಾರ್ಯಾಚರಣೆ್ಥೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಸಿರೂರು, ಬೆಂಗಳೂರು-ಹೈದರಾಬಾದ್ ಹಾಗೂ ಬೆಂಗಳೂರು-ಚೆನ್ನ ಮಾರ್ಗದಲ್ಲಿ ಹೊಸದಾಗಿ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು
ಟಿಕೇಟ್ ಇಲ್ಲದೆ ಪ್ರಯಾಣಿಸಿದ 6076 ಪ್ರಯಾಣಿಕರಿಗೆ ದಂಡ್ಥೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳನ್ನು ತನಿಖೆಗೊಳಪಡಿಸಿ ಟಿಕೇಟ್ ರಹಿತ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿರುತ್ತಾರೆ.
ಬಸವ ಜಯಂತಿ/ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ಕರಾರಸಾ ನಿಗಮದ ವತಿಯಿಂದ ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಅನುಸೂಚಿತ ಸಾರಿಗೆಗಳ ಜೊತೆಗೆ ಬಸವ ಜಯಂತಿ/ಕಾರ್ಮಿಕರ ದಿನಾಚರಣೆ ಪ್ರಯುಕ್ತ ದಿನಾಂಕ: 28/04/2017 ರಿಂದ 30/04/2017ರಂದು ಉಂಟಾಗುವ ಸಂಚಾರ ಒತ್ತಡಕ್ಕನುಗುಣವಾಗಿ 450 ರಿಂದ 500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಕೆಎಸ್ಆರ್ಟಿಸಿಗೆ ಪ್ರತಿಷ್ಠಿತ ರಾಷ್ಟ್ರೀಯ ಹುಡ್ಕೋ ಉತ್ತಮ ಉಪಕ್ರಮ ಪ್ರಶಸ್ತಿ -2017 ಹಾಗೂ ರೂ. ಒಂದು ಲಕ್ಷ ನಗದು ಪುರಸ್ಕಾರ
ದಿನಾಂಕ:25/04/2017 ನವದೆಹಲಿ: ಕೆಎಸ್ಆರ್ಟಿಸಿಯು ಒIಖಿಖಂ- ದೇಶದ ಪ್ರಥಮ ಜಾಣಸಾರಿಗೆ ವ್ಯವಸ್ಥೆ ಮೈಸೂರಿನಲ್ಲಿ ಅನುಷ್ಠಾನಗೊಳಿಸಿದ್ದು, ಈ ಉಪಕ್ರಮಕ್ಕೆ ಹುಡ್ಕೋ ಉತ್ತಮ ಉಪಕ್ರಮ ಪ್ರಶಸ್ತಿ ಮತ್ತು ರೂ.ಒಂದು ಲಕ್ಷ ನಗದು ಲಭಿಸಿರುತ್ತದೆ
ಬೆಂಗಳೂರು-ಕೊಲ್ಲೂರು ಮಾರ್ಗದಲ್ಲಿ ವೋಲ್ವೋ ವಾಹನ ಕಾರ್ಯಾಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 20-04-2017 ರಿಂದ ಹೊಸದಾಗಿ ಬೆಂಗಳೂರು-ಕೊಲ್ಲೂರು ಮಾರ್ಗದಲ್ಲಿ ವೋಲ್ವೋ ವಾಹನವನ್ನು ಕಾರ್ಯಾಚರಣೆ ಮಾಡುವುದು.
ಅಂಬೇಡ್ಕರ್ ಜಯಂತಿ/ಗುಡ್ ಫ್ರೈಡೆ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ಕರಾರಸಾ ನಿಗಮದ ವತಿಯಿಂದ ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಅನುಸೂಚಿತ ಸಾರಿಗೆಗಳ ಜೊತೆಗೆ ಅಂಬೇಡ್ಕರ್ ಜಯಂತಿ/ಗುಡ್ ಫ್ರೈಡೆ ಪ್ರಯುಕ್ತ ದಿನಾಂಕ: 13/04/2017 ರಿಂದ 15/04/2017ರಂದು ಉಂಟಾಗುವ ಸಂಚಾರ ಒತ್ತಡಕ್ಕನುಗುಣವಾಗಿ 250 ರಿಂದ 300 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ: 16/04/2017ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಕೆಎಸ್ಆರ್ಟಿಸಿಗೆ World Resource Institute (WRI) -Connect Karo India ಪ್ರಶಸ್ತಿ -2017 ಸತತ 2ನೇ ಬಾರಿಗೆ ಲಭಿಸಿದೆ
ಕೆಎಸ್ಆರ್ಟಿಸಿಯು ರಸ್ತೆ ಸಾರಿಗೆ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿರುವ ರಸ್ತೆ ಸುರಕ್ಷತಾ ಉಪಕ್ರಮಗಳಿಗೆ ಪ್ರಶಸ್ತಿಯು ಲಭಿಸಿರುತ್ತದೆ. ಸದರಿ ಪ್ರಶಸ್ತಿಯನ್ನು ಶ್ರೀ. Milind Suman, Marathon Runner and Bollywood Actor ಇವರು, ಇಂಡಿಯಾ ಹೆಬಿಟೆಟ್ ಸೆಂಟರ್, ನವದೆಹಲಿ, ಇಲ್ಲಿ ನಡೆದ ಸಮಾರಂಭದಲ್ಲಿ ಶ್ರೀ.ಬಿ.ಎನ್.ಎಸ್ ರೆಡ್ಡಿ, ಐ.ಪಿ.ಎಸ್ ನಿರ್ದೇಶಕರು (ಭದ್ರತಾ & ಜಾಗೃತ) ಕೆಎಸ್ಆರ್ಟಿಸಿರವರಿಗೆ ಪ್ರದಾನ ಮಾಡಿರುತ್ತಾರೆ.
ಲಾರಿ ಮುಷ್ಕರದ ಕಾರಣ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಅನುಕೂಲವಾಗುವಂತೆ ಕೆಎಸ್ಆರ್ ಟಿ ಸಿಯು ತನ್ನ ಎಲ್ಲಾ 15 ವಿಭಾಗಗಳಿಗೆ ಆದೇಶ ನೀಡಿದ್ದು, ಜಿಲ್ಲಾಡಳಿತ ಕೋರಿಕೆಗೆ ಅನುಗುಣವಾಗಿ ಬಸ್ಸುಗಳನ್ನು ಪೂರೈಸಲು ಸೂಚಿಸಿದೆ. ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ಸುಮಾರು 20 ಬಸ್ಸುಗಳನ್ನು ನೆನ್ನೆಯ ದಿನ ಒದಗಿಸಲಾಗಿದ್ದು, ವೈಟ್ ಫೀಲ್ಡ್ ವ್ಯಾಪ್ತಿಯಿಂದ ಅಗತ್ಯ ಸೇವೆಗಳನ್ನು ಸಾಗಾಟ ಮಾಡಲಾಗಿದೆ
ಟಿಕೇಟ್ ಇಲ್ಲದೆ ಪ್ರಯಾಣಿಸಿದ 5688 ಪ್ರಯಾಣಿಕರಿಗೆ ದಂಡ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ, ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳನ್ನು ತನಿಖೆಗೊಳಪಡಿಸಿ ಟಿಕೇಟ್ ರಹಿತ ಪ್ರಯಾಣಿಕರಿಂದ ದಂಡ ವಸೂಲಿ ಮಾಡಿರುತ್ತಾರೆ.
ಕೆಎಸ್ಆರ್ಟಿಸಿಗೆ ಪ್ರತಿಷ್ಠಿತ India Pride ಪ್ರಶಸ್ತಿ -2017
27ನೇ ಮಾರ್ಚ್ 2017, ನವದೆಹಲಿ: “India Pride ಪ್ರಶಸ್ತಿ -2017” ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮತ್ತು ಸಾರಿಗೆ ಸೌಕರ್ಯದಲ್ಲಿನ ಗಣನೀಯ ಪ್ರಗತಿಗಾಗಿ ಕೆಎಸ್ಆರ್ಟಿಸಿಗೆ ಲಭಿಸಿರುತ್ತದೆ.ಈ ಪ್ರಶಸ್ತಿಯನ್ನು ಸತತ ಎರಡನೇ ಬಾರಿಗೆ ಪಡೆಯುತ್ತಿರುವ ದೇಶದ ಏಕೈಕ ರಸ್ತೆ ಸಾರಿಗೆ ನಿಗಮ ಕೆಎಸ್ಆರ್ಟಿಸಿಯಾಗಿದೆ.
ಬೆಂಗಳೂರು-ಬೈಂದೂರು ಮತ್ತು ಬೆಂಗಳೂರು-ಗಂಗೊಳ್ಳಿ ಮಾರ್ಗದಲ್ಲಿ ಸ್ಕ್ಯಾನಿಯಾ ಡೈಮಂಡ್ ಕ್ಲಾಸ್ ಸಾರಿಗೆಗಗಳ ಪರಿಚಯ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಯು ಸಾರ್ವಜನಿಕ ಪ್ರಯಾಣಿಕರ ಅನುಕೂಲ/ಉತ್ತಮ ಸೇವೆಗಾಗಿ ದಿನಾಂಕ 24-03-2017 ರಿಂದ ಬೆಂಗಳೂರು-ಬೈಂದೂರು ಮತ್ತು ಬೆಂಗಳೂರು-ಗಂಗೊಳ್ಳಿ ವಯಾ ಹಾಸನ, ಮಂಗಳೂರು, ಕುಂದಾಪುರ ಮಾರ್ಗದಲ್ಲಿ ಸ್ಕ್ಯಾನಿಯಾ ಡೈಮಂಡ್ ಕ್ಲಾಸ್ ಸಾರಿಗೆಗಳನ್ನು ಪ್ರಾರಂಭಿಸಲಾಗಿದೆ.
ಸರ್ಕಾರದ ಆದೇಶದಂತೆ ಕೆಎಸ್ ಆರ್ ಟಿಸಿ ಚಾಲಕರು, ಕೆಸ್ ಆರ್ ಟಿಸಿ ಬಸ್ ಪಾಸ್ ಹೊಂದಿರುವ ಅಥವಾ ಒಂದು ವೇಳೆ ಬಸ್ ದಿನಾಂಕ ಮುಕ್ತಾಯವಾಗಿದ್ದರೂ ಸಹ SSLC ಪರೀಕ್ಷಾ ವಿದ್ಯಾರ್ಥಿಗಳು ಎಲ್ಲಿಯೇ ಬಸ್ಸನ್ನು ನಿಲ್ಲಿಸಲು ಕೋರಿದರೆ ನಿಲ್ಲಿಸತಕ್ಕದ್ದು, ಹಾಗೂ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಹಕರಿಸತಕ್ಕದ್ದು. (ದಿನಾಂಕ 30/03/2017 to 12/04/2017 ಅವಧಿಗೆ) - ಸಾರಿಗೆ ಸಚಿವರು ಆದೇಶಿಸಿರುತ್ತಾರೆ
ಕೆಎಸ್ಆರ್ಟಿಸಿಗೆ ಪ್ರತಿಷ್ಟಿತ ರಾಷ್ಟ್ರೀಯ “ಎಎಸ್ಆರ್ಟಿಯು ಎಕ್ಸ್ಲೆನ್ಸ್ ಪ್ರಶಸ್ತಿ 2017
ನವದೆಹಲಿ ದಿನಾಂಕ: 16ನೇ ಮಾರ್ಚ್ 2017: ಕೆಎಸ್ಆರ್ಟಿಸಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಂಸ್ಥೆಯು 2015-16ನೇ ಸಾಲಿನಲ್ಲಿ ನಿವ್ವಳ ರೂ.114.95 ಕೋಟಿ ಲಾಭವನ್ನುಗಳಿಸಿದ್ದು, ದೇಶದ ರಸ್ತೆ ಸಾರಿಗೆ ನಿಗಮಗಳಲ್ಲಿಯೇ, ಸದರಿ ವರ್ಷದಲ್ಲಿ ಅತ್ಯಧಿಕ ಲಾಭವನ್ನುಗಳಿಸಿದ ಸಂಸ್ಥೆಯೆಂದು ಕೆಎಸ್ಆರ್ಟಿಸಿಗೆ ಎಎಸ್ಆರ್ಟಿಯು ಎಕ್ಸ್ಲೆನ್ಸ್ ಪ್ರಶಸ್ತಿ-2017’’ ಲಭಿಸಿರುತ್ತದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೇಸಿಗೆ- ವಿಶೇಷ ಸಾರಿಗೆಗಳ ಕಾರ್ಯಾಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಬೆಂಗಳೂರು-ವಡಕರ ಮಾರ್ಗದಲ್ಲಿ ರಾಜಹಂಸ ಸಾರಿಗೆಯನ್ನು, ಬೆಂಗಳೂರು-ಕಾಂಚೀಪುರಂ ಮಾರ್ಗದಲ್ಲಿ ಕರೋನ ಸಾರಿಗೆಯನ್ನು, ಬೆಂಗಳೂರು- ಸೇಲಂ ಮಾರ್ಗದಲ್ಲಿ ಕರೋನ ಸಾರಿಗೆಯನ್ನು, ಬೆಂಗಳೂರು-ಪಣಜಿ ಮಾರ್ಗದಲ್ಲಿ ನಾನ್ ಎಸಿ ಸ್ಲೀಪರ್ ಮತ್ತು ಮಲ್ಟಿಆಕ್ಸಲ್ ಸಾರಿಗೆಗಳನ್ನು, ಬೆಂಗಳೂರು-ಕಡಪ ಮಾರ್ಗದಲ್ಲಿ ವೋಲ್ವೋ ಸಾರಿಗೆಗಳನ್ನು, ಬೆಂಗಳೂರು-ಊಟಿ ಮಾರ್ಗದಲ್ಲಿ ಮಲ್ಟಿಆಕ್ಸಲ್ ಸಾರಿಗೆಯನ್ನು, ಬೆಂಗಳೂರು-ತಿರುಪತಿ ಮಾರ್ಗದಲ್ಲಿ ವೇಗದೂತ ಸಾರಿಗೆಗಳನ್ನು ಹಾಗೂ ಬೆಂಗಳೂರು- ತಿರುಕೊಯ್ಲೂರು ಮಾರ್ಗದಲ್ಲಿ ವೇಗದೂತ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ದಿನಾಂಕ 8-03-2017 ರಂದು ಕರಾರಸಾ ನಿಗಮ, ಕೇಂದ್ರ ಕಛೇರಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ದಿನಾಂಕ: 08/03/2017 ರಂದು ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪದ್ಮಶ್ರೀ ಪುರಸ್ಕಾರ ಪಡೆದ ಶ್ರೀಮತಿ.ಸುಕ್ರಿ ಬೊಮ್ಮಗೌಡ (ಸುಕ್ರಜ್ಜಿ) ರವರರಿಂದ ಸಸಿಗಳನ್ನು ನೆಡಸಿ, ಕರಾರಸಾ ನಿಗಮವು ರೂ.25,000/- ನಗದು ಪುರಸ್ಕಾರ ಮತ್ತು ಉಚಿತ ಬಸ್ ಪಾಸ್ನ್ನು ನೀಡಿ (ವೋಲ್ವೋ ಬಸ್ ಸೇರಿದಂತೆ) ಗೌರವಿಸಲಾಯಿತು.
ಕೆಎಸ್ಆರ್ಟಿಸಿಗೆ ವರ್ಷದ ಅತ್ಯುತ್ತುಮ ಸಂಸ್ಥೆ Corporate Leadership Award ರಾಷ್ಟ್ರೀಯ ಪ್ರಶಸ್ತಿ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿನ ಉತ್ತಮ ಉಪಕ್ರಮಗಳಿಗೆ 5 ವರ್ಗಗಳಲ್ಲಿ ಕಾರ್ಪೋರೇಟ್ ಕೋಲ್ಯಾಟರಲ್ ಪ್ರಶಸ್ತಿ
ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಂಸ್ಥೆಗಳು ಸಲ್ಲಿಸಿರುವ ಕೊಡುಗೆಗಳನ್ನು ಗುರುತಿಸಿ ನೀಡುವ ಕೆಎಸ್ಆರ್ಟಿಸಿಗೆ ವರ್ಷದ ಅತ್ಯುತ್ತಮ ಸಂಸ್ಥೆ Corporate Leadership Award ರಾಷ್ಟ್ರೀಯ ಪ್ರಶಸ್ತಿ ಮತ್ತು ಕಾರ್ಪೋರೇಟ್ ಕೋಲ್ಯಾಟರಲ್ ಪ್ರಶಸ್ತಿಯ 5 ವರ್ಗಗಳಲ್ಲಿ ಕೆಎಸ್ಆರ್ಟಿಸಿಯ ಆಂತರಿಕ ನಿಯತಕಾಲಿಕ, ಕಾರ್ಪೋರೇಟ್ ಜಾಹೀರಾತು, ಇದು ನನ್ನ ಬಸ್ಸು - ಸಾರ್ವಜನಿಕ ಅಭಿಯಾನ, ಸಾಕ್ಷ್ಯಚಿತ್ರ ಮತ್ತು ವಾರ್ಷಿಕ ವರದಿ ದಾಖಲಾತಿಯ ಕಾರ್ಯಗಳಿಗೆ ಒಟ್ಟು 5 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕರ್ನಾಟಕ ರಾಜ್ಯದ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ.25 ರಿಯಾಯಿತಿ
ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ, ಹೊರವಲಯ, ಸಾಮಾನ್ಯ, ವೇಗದೂತ, ಅರೆ ಸುವಿಹಾರಿ ಮತ್ತು ರಾಜಹಂಸ ಬಸ್ಸುಗಳಲ್ಲಿ 60 ವರ್ಷ ಪೂರ್ಣಗೊಂಡಿರುವ ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನ ಕರ್ನಾಟಕ ರಾಜ್ಯದ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ.25 ರಿಯಾಯಿತಿ ಸೌಲಭ್ಯ ಒದಗಿಸಲಾಗಿದೆ.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ಕರಾರಸಾ ನಿಗಮದ ವತಿಯಿಂದ ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಅನುಸೂಚಿತ ಸಾರಿಗೆಗಳ ಜೊತೆಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದಿನಾಂಕ: 23/02/2017 ಹಾಗೂ 24/02/2017ರಂದು ಉಂಟಾಗುವ ಸಂಚಾರ ಒತ್ತಡಕ್ಕನುಗುಣವಾಗಿ 450 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಹೊಸ ಸಾರಿಗೆಗಳ ಕಾರ್ಯಾಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು- ಚಿಕ್ಕಮಗಳೂರು, ಬೆಂಗಳೂರು-ಶೃಂಗೇರಿ, ಬೆಂಗಳೂರು-ಕೊಟ್ಟಾಯಂ ಹಾಗೂ ಬೆಂಗಳೂರು (ವಿದ್ಯಾರಣ್ಯಪುರ)-ನಾಪೋಕ್ಲು ಮಾರ್ಗಗಳಲ್ಲಿ ಹೊಸದಾಗಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಕೆಎಸ್ಆರ್ಟಿಸಿಯಲ್ಲಿ ಗಣರಾಜ್ಯೋತ್ಸವ ಸಮಾರಂಭ ಹಾಗೂ ಸಂಸ್ಥೆಯ ನೌಕರರು ಮತ್ತು ಅಧಿಕಾರಿಗಳ ಮಕ್ಕಳ ಶೈಕ್ಷಣಿಕ ರಂಗದಲ್ಲಿನ ಅತ್ಯುತ್ತಮ ಸಾಧನೆಗಾಗಿ ನಗದು ಪುರಸ್ಕಾರ
ಕೆಎಸ್ಆರ್ಟಿಸಿ ನೌಕರರು ಮತ್ತು ಅಧಿಕಾರಿಗಳ ಮಕ್ಕಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶೈಕ್ಷಣಿಕ ರಂಗದಲ್ಲಿ ಎಸ್ಎಸ್ಎಲ್ಸಿ, ದ್ವೀತೀಯ ಪಿಯುಸಿಯ ಪರೀಕ್ಷೆಯಲ್ಲಿ ಶೇಕಡ 70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮತ್ತು ಪದವಿ ಪರೀಕ್ಷೆಯಲ್ಲಿ ಶೇಕಡ 60 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ನಿಗಮದ ನೌಕರರ ಮತ್ತು ಅಧಿಕಾರಿಗಳ ಮಕ್ಕಳಿಗೆ ನಗದು ಪುರಸ್ಕಾರವನ್ನು ನೀಡಿ ಗೌರವಿಸುವ ಪದ್ಧತಿ ಜಾರಿಯಲ್ಲಿರುತ್ತದೆ.
ಕೆಎಸ್ಆರ್ಟಿಸಿ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ PSU Leadership ರಾಷ್ಟ್ರೀಯ ಪ್ರಶಸ್ತಿಗಳು -2017
ಕೆಎಸ್ಆರ್ಟಿಸಿಯ ಉಪಕ್ರಮ ‘ಅವತಾರ್’ ವ್ಯವಸ್ಥೆ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ PSU Leadership ರಾಷ್ಟ್ರೀಯ ಪ್ರಶಸ್ತಿ -2017 ಗಳನ್ನು ಪ್ರದಾನ ಮಾಡಲಾಗಿರುತ್ತದೆ
ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್
ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಗೊಂಡ ದೇಶದ ಪ್ರಪ್ರಥಮ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ಆರ್ಟಿಸಿ- ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದ ದೇಶದ ಮೊದಲ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯದ ಮೊದಲ ಸರ್ಕಾರಿ ಸಂಸ್ಥೆ
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮದಿಂದ ವಿಶೇಷ ಸಾರಿಗೆ ವ್ಯವಸ್ಥೆ
ಕರಾರಸಾ ನಿಗಮದ ವತಿಯಿಂದ ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಅನುಸೂಚಿತ ಸಾರಿಗೆಗಳ ಜೊತೆಗೆ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿನಾಂಕ: 13/01/2017 ಹಾಗೂ 14/01/2017ರಂದು ಉಂಟಾಗುವ ಸಂಚಾರ ಒತ್ತಡಕ್ಕನುಗುಣವಾಗಿ 650 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರೀಯ e- Governance ಚಿನ್ನದ ಪದಕ
ಭಾರತ ಸರ್ಕಾರವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡುವ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ “ರಾಷ್ಟ್ರೀಯ e- Governance 2016-17" ನೇ ಸಾಲಿನ ಪ್ರಶಸ್ತಿಯನ್ನು ಕೆಎಸ್ಆರ್ಟಿಸಿಯು “Innovative use of ICT by State Government PSUS / Co-operatives/Federations/ Societies’ ವರ್ಗದಲ್ಲಿ ಚಿನ್ನದ ಪದಕ ಮತ್ತು ರೂ. 2 ಲಕ್ಷ ನಗದು ಪಡೆಯುವ ಮೂಲಕ ತನ್ನದಾಗಿಸಿಕೊಂಡಿದೆ
ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ 100% ಬಯೋ ಡೀಸೆಲ್ ಮಲ್ಟಿ ಆಕ್ಸಲ್ 25 ಬಸ್ಸುಗಳು
ಶ್ರೀ.ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಸಚಿವರು, ಅಧ್ಯಕ್ಷರು ಕೆ.ಎಸ್.ಆರ್.ಟಿ.ಸಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ರವರು ದಿನಾಂಕ 24-12-2016 ರಂದು 11-00 ಗಂಟೆಗೆ ಕರಾರಸಾನಿಗಮದ 4ನೇ ಘಟಕದ ಆವರಣದಲ್ಲಿ ಚಾಲನೆ ನೀಡಿದರು.
2017 ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ಪಾಸ್ಗಳನ್ನು ವಿತರಣೆ/ನವೀಕರಣ
ವಿಕಲಚೇತನ ಫಲಾನುಭವಿಗಳಿಗೆ ನವೀಕರಿಸಿಕೊಳ್ಳಲು ಆಗಬಹುದಾದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಹಾಲಿ 2016 ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್ಪಾಸ್ಗಳನ್ನು ದಿನಾಂಕ: 28.02.2017 ರವರೆಗೆ ಅನುಮತಿಸಲಾಗುವುದು
ಐರಾವತ(ಸ್ಕ್ಯಾನಿಯಾ) ಡೈಮಂಡ್ ಕ್ಲಾಸ್ ಸಾರಿಗೆ
ಬೆಂಗಳೂರು-ಮುರುಡೇಶ್ವರ, ಹಾಗೂ ಬೆಂಗಳೂರು-ಕುಂದಾಪುರ ವಯಾ ಹಾಸನ, ಮಂಗಳೂರು ಮಾರ್ಗದಲ್ಲಿ ಐರಾವತ(ಸ್ಕ್ಯಾನಿಯಾ) ಡೈಮಂಡ್ ಕ್ಲಾಸ್ ಸಾರಿಗೆಗಳ ಕಾರ್ಯಚರಣಿ .
ಕೆಎಸ್ಆರ್ಟಿಸಿಗೆ ಪತಿಷ್ಟಿತ Business World Smart Cities ಪ್ರಶಸ್ತಿ-2016 :
ದಿನಾಂಕ 21ನೇ ಡಿಸೆಂಬರ್ ನವದೆಹಲಿ: ಕೆಎಸ್ಆರ್ಟಿಸಿಯ Intelligent Transport System (ಜಾಣ ಸಾರಿಗೆ ವ್ಯವಸ್ಥೆ) ಮೊಬೈಲ್ ಆಪ್ ಉಪಕ್ರಮಕ್ಕೆ ಪ್ರತಿಷ್ಟಿತ Business World Smart Cities ಪ್ರಶಸ್ತಿ-2016 Accessibility & Mobility ವರ್ಗದಲ್ಲಿ ಲಭಿಸಿರುತ್ತದೆ
ಕೆಎಸ್ಆರ್ಟಿಸಿಗೆ 150 ನೇ ಪ್ರಶಸ್ತಿ
ಕೆಎಸ್ಆರ್ಟಿಸಿಗೆ 150 ನೇ ಪ್ರಶಸ್ತಿ - ವಿವಿಧ ವರ್ಗಗಳಲ್ಲಿ ಅತೀ ಹೆಚ್ಚು 19 ಪ್ರಶಸ್ತಿಗಳನ್ನು ಪಡೆದ ದೇಶದ ಏಕೈಕ ಸಂಸ್ಥೆ ಕೆಎಸ್ಆರ್ಟಿಸಿ ಪ್ರತಿಷ್ಠಿತ ರಾಷ್ಟ್ರೀಯ SKOCH Order of Merit and Smart Mobility ಪ್ರಶಸ್ತಿ-2016
ಪರಿಷ್ಕೃತ ಪ್ರಯಾಣ ದರ : ಬೆಂಗಳೂರು – ಮೈಸೂರು ಮಾರ್ಗ
ಬೆಂಗಳೂರು – ಮೈಸೂರು ಮಾರ್ಗದ ಮಲ್ಟಿ ಅಕ್ಸಲ್, ಐರಾವತ ಮತ್ತು ರಾಜಹಂಸ ಸಾರಿಗೆಗಳ ಪ್ರಯಾಣ ದರ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.
Sl.No. | Service | Fare |
---|---|---|
1 | ರಾಜಹಂಸ | ರೂ.150/- |
2 | ಐರಾವತ | ರೂ.230/- |
3 | ಮಲ್ಟಿ ಅಕ್ಸಲ್ | ರೂ.300/- |
ವಿಟಿಎಂಎಸ್-ಪಿಐಎಸ್ ಯೋಜನೆಯ ಮೊದಲ ಹಂತ
ವಿಟಿಎಂಎಸ್-ಪಿಐಎಸ್ ಯೋಜನೆಯ ಮೊದಲ ಹಂತದಲ್ಲಿ ಬೆಂಗಳೂರು ಕೇಂದ್ರಿಯ ವಿಭಾಗದ ಎಲ್ಲಾ ಅನುಸೂಚಿಗಳು ಮತ್ತು ರಾಮನಗರ, ಮೈಸೂರು ಗ್ರಾಮಾಂತರ, ಮಂಗಳೂರು ಹಾಗೂ ಪುತ್ತೂರು ವಿಭಾಗದ ವೇಗದೂತ ಮೇಲ್ದರ್ಜೆಯ 1900 ಸಾರಿಗೆಗಳನ್ನು ಒಳಪಡಿಸಲಾಗಿದ್ದು, ಪ್ರಸ್ತುತ ಪರೀಕ್ಷಾರ್ಥ ಹಂತದಲ್ಲಿರುತ್ತದೆ.
National Smart Governance Award-2015
ನಿಗಮವು ಅನುಷ್ಠಾನಗೊಳಿಸಿರುವ 3 ಯೋಜನೆಗಳನ್ನು ಗುರುತಿಸಿ, ಇಂಡಿಯ ಹ್ಯಾಬಿಟಾಟ್ ಸೆಂಟರ್, ನವದೆಹಲಿಯಲ್ಲಿ ಜರುಗಿದ 41ನೇ ರಾಷ್ಟ್ರೀಯ Transformative Governance ಸ್ಕಾಚ್ ಶೃಂಗಸಭೆಯಲ್ಲಿ 2015 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕರಾರಸಾನಿವು ಮೊಬೈಲ್ ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ: ಟಿಕೆಟ್ನ ಮುದ್ರಿತ ಪ್ರತಿ ಇನ್ನು ಮುಂದೆ ಕಡ್ಡಾಯವಲ್ಲ.
ಕರಾರಸಾನಿವು, ಭಾರತದಲ್ಲೇ ಮೊದಲ ಬಾರಿಗೆ, ಮುದ್ರಿತ ಟಿಕೆಟ್ ರಹಿತ ಪ್ರಯಾಣವನ್ನು ಪರಿಚಯಿಸುವ ಮೂಲಕ, ಇತರೆ ಸಾರಿಗೆ ವ್ಯವಸ್ಥೆಗಳಿಗೆ ಮಾದರಿಯಾಗಿದೆ. ಈಗ ಅಂತರ್ಜಾಲದ ಮೂಲಕ ಕಾದಿರಿಸಿದ ಈ ಟಿಕೆಟ್ ಅಥವಾ ಎಮ್-ಟಿಕೆಟ್ಗೆ ಮುದ್ರಿತ ಪ್ರತಿಯ ಅವಶ್ಯಕತೆ ಇಲ್ಲ. ಪ್ರಯಾಣಿಕರು ಕೇವಲ ತಮ್ಮ ಮೊಬೈಲ್ನಲ್ಲಿ ಪಡೆದಿರುವ ಟಿಕೆಟ್ ಖಚಿತತೆಯ ಸಂದೇಶ ಮತ್ತು ತಮ್ಮ ಗುರುತಿನ ಚೀಟಿಯನ್ನು ಪ್ರಯಾಣದ ವೇಳೆಯಲ್ಲಿ ಬಸ್ನ ನಿರ್ವಾಹಕರೆದುರು ಹಾಜರು ಪಡೆಸಿದರೆ ಸಾಕು. ಕರಾರಸಾನಿದ ಅಂತರ್ಜಾಲ ತಾಣದಲ್ಲಿ ಅಥವಾ ಮೊಬೈಲ್ ತಾಣದಲ್ಲಿ ಟಿಕೆಟ್ ಕಾದಿರಿಸುವಾಗ, ಪ್ರಯಾಣಿಕರು ತಮ್ಮ ಮೊಬೈಲ್ ಸಂಖ್ಯೆ, ಜನನ ದಿನಾಂಕ, ಮತ್ತು ವಿಳಾಸಗಳನ್ನೊಳಗೊಂಡಂತೆ ತಮ್ಮ ಎಲ್ಲ ವೈಯಕ್ತಿಕ ವಿವರಗಳನ್ನು ಒದಗಿಸಬೇಕಾಗುತ್ತದೆ. ಟಿಕೆಟ್ ಕಾದಿರಿಸಿದ ನಂತರ, ಈ- ವ್ಯವಸ್ಥೆಯಿಂದ ನಿರ್ಮಾಣಗೊಂಡ ಈ-ಟಿಕೆಟ್ ವಿವರಗಳನ್ನು ಪ್ರಯಾಣಿಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು. ಈ ಈ-ವ್ಯವಸ್ಥೆಯಿಂದ ನಿರ್ಮಿತ ಟಿಕೆಟ್, ಪ್ರಯಾಣಿಕರ ಹೆಸರು, ಟ್ರಿಪ್ ಸಂಕೇತ, ಪಿಎನ್ಆರ್ ಸಂಖ್ಯೆ, ಪ್ರಯಾಣದ ದಿನಾಂಕ, ನಿರ್ಗಮನದ ವೇಳೆ, ಆರಂಭಿಕ ಬಸ್ ನಿಲ್ದಾಣ, ಮತ್ತು ಆಸನ ಸಂಖ್ಯೆ ಕುರಿತಾದ ಎಲ್ಲ ವಿವರಗಳನ್ನು ಒಳಗೊಂಡಿರುತ್ತದೆ. ಈ ಹೊಸ ಹೆಜ್ಜೆ ಕೇವಲ ಪರಿಸರ ಸ್ನೇಹಿ ಅಷ್ಟೇ ಅಲ್ಲದೇ ಪ್ರಯಾಣಿಕರಿಗೂ ಅನುಕೂಲಕರವಾಗಿದೆ. ಪ್ರಯಾಣಿಕರು ಈಗ ಟಿಕೆಟ್ಗಳನ್ನು ತಾವು ಸಂಚರಿಸುತ್ತಿರುವಾಗಲೇ ಕಾದಿರಿಸಬಹುದಾಗಿದೆ ಮತ್ತು ಯಾವುದೇ ಮುದ್ರಿತ ಪ್ರತಿಯ ಅವಶ್ಯಕತೆಯೂ ಈಗ ಇಲ್ಲ.
Last updated date